ನವದೆಹಲಿ : 16ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜು. 20 ರಂದು ಆರಂಭವಾದ ಕಾರ್ಗಿಲ್ ವಿಜಯ ದಿವಸದ ಕಾರ್ಯಕ್ರಮಗಳು ಭಾನುವಾರ ಸಂಪನ್ನಗೊಳ್ಳಲಿವೆ.
ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ಸೂಚಿಸಿ ಮಾತನಾಡಿದ ಭಾರತೀಯ ಸೇನೆ ಮುಖ್ಯಸ್ಥ ಜ| ದಲ್ಬಿರ್ ಸಿಂಗ್ ಸುಹಾಗ್, ಮತ್ತೂಂದು ಕಾರ್ಗಿಲ್ ಕದನ ನಡೆಯಲು ಭಾರತೀಯ ಸೇನೆ ಅನುವು ಮಾಡುವುದಿಲ್ಲ ಎಂದು ಹೇಳಿದರು.
ಕಾರ್ಗಿಲ್ ಕದನ 1999ರ ಮೇ ತಿಂಗಳಲ್ಲಿ ಶುರುವಾಗಿ ಸುಮಾರು 2 ತಿಂಗಳ ಕಾಲ ನಡೆದಿತ್ತು. ಪಾಕಿಸ್ತಾನ ಸೇನೆ ಸಿಯಾಚಿನ್ ಪ್ರದೇಶ ವಶಪಡಿಸಿಕೊಳ್ಳಲು ಭಾರತದ ಗಡಿಯೊಳಗೆ ನುಗ್ಗಿತ್ತು. ಕಾರ್ಗಿಲ್ ಪರ್ವತವನ್ನು ಆಕ್ರಮಿಸಿಕೊಂಡಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ 490 ಅಧಿಕಾರಿಗಳು, ಯೋಧರು, ಜವಾನರು ಹುತಾತ್ಮರಾಗಿದ್ದರು. ಜು.26ರಂದು ಪಾಕ್ ಸೇನೆಯನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿ ಕಾರ್ಗಿಲ್ ಪರ್ವತದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದರು.