ನವದೆಹಲಿ : ಲಲಿತ್ ಗೇಟ್ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ವಾಗ್ದಾಳಿ ತಡೆಯಲು, ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಹೊಸ ಪ್ರತಿ ಆಕ್ರಮಣ ನಡೆಸಿದ್ದಾರೆ.
ಬಹುಕೋಟಿ ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿ ಸಂತೋಷ ಬಗ್ರೋಡಿಯಾ ಅವರಿಗೆ ಪಾಸ್ಪೋರ್ಟ್ ನೀಡುವಂತೆ ಕಾಂಗ್ರೆಸ್ ನ ಪ್ರಭಾವಿ ಮುಖಂಡರೊಬ್ಬರು ತಮಗೆ ಒತ್ತಡ ಹೇರಿದ್ದರು. ಆದರೆ ತಾವು ಒಪ್ಪಿಕೊೞಲಿಲ್ಲ ಎಂದು ಸುಷ್ಮಾ ಸ್ವರಾಜ್ ಬುಧವಾರ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನ ಮುಖಂಡ ಯಾರೂ ಎನ್ನುವುದನ್ನು ಸಂಸತ್ನಲ್ಲೇ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.
ಮಂಗಳವಾರ, ಮೊದಲ ದಿನದ ರಾಜ್ಯಸಭೆಯ ಕಲಾಪದಲ್ಲಿ ಲಲಿತ್ ಗೇಟ್ ವಿಷಯವಾಗಿ ಗದ್ದಲ ನಡೆದಿತ್ತು. ಸಮಸ್ಯೆಯ ಕುರಿತು ಚರ್ಚೆಗೆ ನಿರಾಕರಿಸಿದ ಕಾಂಗ್ರೆಸ್ ಮೊದಲು ಸುಷ್ಮಾ ಸ್ವರಾಜ್ ಅವರ ರಾಜೀನಾಮೆ ಕೇಳಿತ್ತು.