Untitled Document
Sign Up | Login    
Dynamic website and Portals
  
July 5, 2015

ವಿದೇಶೀ ಎನ್ ಜಿ ಒ ಸಂಶೋಧಕರಿಗೆ ಇನ್ನು ಮುಂದೆ ವೀಸಾ ದುರ್ಲಭ

ವಿದೇಶೀ ಸಂಶೋಧಕರಿಂದ ಭಾರತ ವೀಸಾದ ವ್ಯಾಪಕ ದುರುಪಯೋಗದ ಹಿನ್ನಲೆ

ನವದೆಹಲಿ : ಭಾರತದಲ್ಲಿ ಸರಕಾರೇತರ ಸಂಸ್ಥೆ (ಎನ್.ಜಿ.ಒ) ಗಳಲ್ಲಿ ಮಾನವ ಹಕ್ಕು ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡಲು ಬಯಸುವ ವಿದೇಶೀಯರು ಇನ್ನು ಮುಂದೆ ವೀಸಾ ಪಡೆಯಲು ಸರಕಾರ ಕಠಿಣ ಪರಿಶೀಲನೆಗಳಿಗೆ ಒಳಪಡಬೇಕಾಗುತ್ತದೆ.

ಸಂಶೋಧನಗೆಳಿಗೆ ಸಂಬಂಧಿಸಿದಂತೆ ಭಾರತದ ಉದಾರ ನೀತಿಯನ್ನು ದುರುಪಯೋಗಪಡಿಸಿದ ಉದಾಹರಣೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ಭಾರತದಲ್ಲಿ ಸಂಶೋಧನೆ ನಡೆಸಲು ಹಾಗೂ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ವಿದೇಶೀ ಪ್ರೊಫೆಸರ್ ಗಳಿಗೆ, ವಿದ್ವಾಂಸರುಗಳಿಗೆ ಮತ್ತು ಪ್ರತಿನಿಧಿಗಳಿಗೆ ನೀಡುತ್ತಿದ್ದ ವೀಸಾಗಳನ್ನು ವಿದೇಶೀಯರು ದುರುಪಯೋಗ ಪಡಿಸುತ್ತಿರುವ ಹಲವಾರು ಘಟನೆಗಳು ಇತ್ತೀಚೆಗೆ ಹೆಚ್ಚಿತ್ತಿರುವ ವಿಚಾರ ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ಬಂದಿದೆ. ಇದನ್ನು ಹತ್ತಿಕ್ಕಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

'ಎಲ್ಲಾ ಸಂಶೋಧನಾ ವೀಸಾ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು. ಅರ್ಜಿದಾರ ತಾನು ಭಾರತದಲ್ಲಿ ನಡೆಸಲು ಉದ್ದೇಶಿಸುವ ಸಂಶೋಧನಾ ವಿಷಯ / ಪ್ರಾಜೆಕ್ಟ್ದ ಬಗ್ಗೆ ಮುಂಗಡವಾಗಿ ತಿಳಿಸಬೇಕಾಗುತ್ತದೆ. ಅದು ಸಮರ್ಪಕ, ವಿವಾದರಹಿತ ಮತ್ತು ಭಾರತಕ್ಕೆ ಪ್ರಯೋಜನಕಾರಿ ಎಂದು ಕಂಡುಬಂದಲ್ಲಿ ಮಾತ್ರ ನಾವು ಅವರಿಗೆ ವೀಸಾ ನೀಡುತ್ತೇವೆ' ಎಂದು ಬೃಹ ಖಾತೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಗೆ ಕ್ರಿಸ್ಟೀನ್ ಮೆಹ್ತಾ ಎಂಬಾಕೆ ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ 'ಸಂಶೋಧನಾ' ವರದಿಯನ್ನು ಆಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮುಂಚಿತವಾಗಿ ಒಪ್ಪಿಸಿಲ್ಲವಾದ್ದರಿಂದ ಆಕೆಯನ್ನು ನವಂಬರ್ 2014ರಲ್ಲಿ ದೇಶದಿಂದ ಗಡೀಪಾರು ಮಾಡಲಾಗಿತ್ತು.

ಈ ಹಿಂದೆ ಬಹಳ ಸಂಖ್ಯೆಯಲ್ಲಿ ವಿದೇಶೀಯರು ಭಾರತದಲ್ಲಿ ಗ್ರೀನ್ ಪೀಸ್ ಸೇರಿದಂತೆ ಎನ್.ಜಿ.ಒ ಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರು ಸರಕಾರೀ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ.

ಗೃಹ ಸಚಿವಾಲಯದ ಪ್ರಕಾರ ಭಾರತಕ್ಕೆ ಈ ವಿದೇಶೀ 'ಸಂಶೋಧಕರು' ಯಾತ್ರೀ ವೀಸಾಗಳ ಮೂಲಕ ಬಂದು ಇಲ್ಲಿ ಪರಿಸರ ಮತ್ತು ಮಾನವ ಹಕ್ಕುಗಳ ವಿಚಾರದಲ್ಲಿ ತೊಡಗಿರುವ ಎನ್.ಜಿ.ಒ ಗಳೊಡನೆ ಸೇರಿಕೊಂಡು ತಮ್ಮ 'ಸಂಶೋಧನೆ'ಗಳನ್ನು ಮಾಡುತ್ತಾರೆ.

'ಈ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಅಲ್ಲದೆ, ಪ್ರವಾಸೀ ವೀಸಾಗಳನ್ನು ದುರುಪಯೋಗಪಡಿಸುವುದಕ್ಕೆ ಸಹ ನಾವು ಅವಕಾಶ ನೀಡುವುದಿಲ್ಲ' ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಆದರೆ, ಪ್ರಾಮಾಣಿಕ ಸಂಶೋಧಕರಿಗೆ, ಯುಜಿಸಿಯಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಸಂಶೋಧನೆ ಮಾಡಲು ಯಾವುದೇ ತೊಡಕು ಎದುರಾಗದು.

ಐ.ಸಿ.ಎಸ್.ಆರ್ ಸಂಸ್ಥೆಯಿಂದ ವಿದ್ಯಾರ್ಥಿವೇತನ ಪಡೆದ ವಿದೇಶೀ ವಿದ್ವಾಂಸರುಗಳ ವೀಸಾ ಅರ್ಜಿಗಳ ವಿಲೇವರಿಯಲ್ಲೂ ಯಾವುದೇ ಬಾಧಕ ಎದುರಾಗದು ಎಂದು ಅಧಿಕಾರಿ ಹೇಳಿದ್ದಾರೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 42,000 ವಿದೇಶೀ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಅವರಲ್ಲಿ ಸುಮಾರು 3,800 ಮಂದಿ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಇವರಲ್ಲಿ ಬಹುತೇಕರು ನೇಪಾಳ, ಭೂತಾನ್, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳಿಗೆ ಸೇರಿದವರಾಗಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited