ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಬುಧವಾರ ಆಗಮಿಸುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅಮರನಾಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. 1,000 ಕ್ಕೂ ಅಧಿಕ ಯಾತ್ರಾರ್ಥಿಗಳ ಮೊದಲ ತಂಡ ಬುಧವಾರ ಜಮ್ಮುವಿನಿಂದ ಹೊರಡಲಿದೆ.
ಸಮುದ್ರ ಮಟ್ಟದಿಂದ ಸುಮಾರು 14,500 ಅಡಿ ಎತ್ತರದಲ್ಲಿರುವ ಹಿಮಾಲಯ ತಪ್ಪಲಿನ ಗುಹೆಯೊಂದರಲ್ಲಿ ನಿರ್ಮಾಣವಾಗಲಿರುವ ಮಂಜುಗಡ್ಡೆಯ ಶಿವಲಿಂಗ ದರ್ಶನಕ್ಕಾಗಿ 59 ದಿನಗಳ ಚಾರಣದ ಮೂಲಕ ಭಕ್ತರು ಗುಹೆ ತಲುಪಬೇಕಾಗುತ್ತದೆ.
ಪ್ರತೇಕತಾವಾದಿಗಳಿಂದ ದಾಳಿ ತಡೆಯಲು ೩ ಸುತ್ತಿನ ರಕ್ಷಣಾ ಪಡೆ ನಿರ್ಮಿಸಲಾಗಿದೆ.