ನವದೆಹಲಿ : ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ವಿದೇಶದಲ್ಲಿರಲು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್.ಎಸ್.ಎಸ್, ಬಿಜೆಪಿ ನಾಯಕರ ವಿರುದ್ಧ ಗರಂ ಆಗಿದೆ. ಲಲಿತ್ ಮೋದಿಗೆ ನೆರವು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಖಾತ ಸಚಿವೆ ಸುಷ್ಮಾ ಸವ್ರಾಜ್ ಹಾಗೂ ರಾಜಸ್ಥಾನ ಸಿಎಂ ವಸುಂಧರಾ ರಾಜೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆರ್.ಎಸ್.ಎಸ್ ಹಿರಿಯ ನಾಯಕ ಗೋವಿಂದಾಚಾರ್ಯ, ಜನರ ದೃಷ್ಟಿಯಲ್ಲಿ ಲಲಿತ್ ಮೋದಿ ಹಗರಣದಲ್ಲಿ ಸುಷ್ಮಾ ಸ್ವರಾಜ್ ಹಾಗೂ ವಂಸುಂಧರಾ ರಾಜೇ ಪಾತ್ರ ಸಾಬೀತಾಗಿದೆ. ಹೀಗಾಗಿ ಇವರಿಬ್ಬರೂ ರಾಜೀನಾಮೆ ನೀಡಲಿ, ಇಲ್ಲವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ವಿದೇಶಾಂಗ ಖಾತೆ ಸಚಿವೆ ಸ್ಥಾನಕ್ಕೆ ಸುಷ್ಮಾ ಸ್ವರಾಜ್. ರಾಜಸ್ಥಾನ ಸಿಎಂ ವಸುಂಧರಾ ರಾಜೇ ರಾಜೀನಾಮೆ ನೀಡಲಿ. ಇಲ್ಲವಾದರೆ ಪ್ರಧಾನಿ ಮೋದಿ ಇವರಿಬ್ಬರನ್ನು ವಜಾ ಮಾದಲಿ. ಆರ್ ಎಸ್ ಎಸ್ ಹಿರಿಯ ಮುಖಂಡ ಗೋವಿಂದಾಚಾರ್ ಒತ್ತಾಯ.
ಭಾರತೀಯ ಜನತಾ ಪಾರ್ಟಿ ಕಾರ್ಯವೈಖರಿ ಸರಿಯಾಗಲಿ. ಬಿಜೆಪಿ ನಾಯಕರಿಗೆ ಎಲ್.ಕೆ ಅಡ್ವಾಣಿ ಮಾದರಿಯಾಗಲಿ. ಪಕ್ಷದ ಗೌರವಕ್ಕಿಂತ ಯಾವುದೇ ವ್ಯಕ್ತಿ ಮುಖ್ಯವಾಗಬಾರದು.ಲಲಿತ್ ಗೇಟ್ ಹಗರಣದಲ್ಲಿ ಇಬ್ಬರಿಬ್ಬರ ಪಾತ್ರ ಸಾಬೀತಾಗಿದೆ. ಹಾಗಾಗಿ ಇವರಿಬ್ಬರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.