Untitled Document
Sign Up | Login    
Dynamic website and Portals
  
June 23, 2015

ಬೆಂಗಳೂರು ಇಸ್ರೇಲ್‌ ದೂತಾವಾಸದ ಮೇಲೆ ದಾಳಿ ಸಾಧ್ಯತೆ: ಕಟ್ಟೆಚ್ಚರ

ನವದೆಹಲಿ : ಭಾರತದಲ್ಲಿನ ಇಸ್ರೇಲ್‌ ದೂತಾವಾಸ ಕಚೇರಿಗಳು ಮತ್ತು ಭಾರತ ಪ್ರವಾಸದಲ್ಲಿರುವ ಇಸ್ರೇಲಿ ಪ್ರವಾಸಿಗರ ಮೇಲೆ ಲಷ್ಕರ್‌ ಎ ತೊಯ್ಬಾ ಉಗ್ರದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ದೆಹಲಿ, ಕರ್ನಾಟಕ ಸೇರಿದಂತೆ ಇಸ್ರೇಲ್‌ ಸರ್ಕಾರದ ಸಂಸ್ಥೆಗಳು ಇರುವ ರಾಜ್ಯಗಳ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಬೆಂಗಳೂರಿನ ಯಶವಂತಪುರದ ವರ್ಲ್ಡ್ ಟ್ರೇಡ್‌ ಸೆಂಟರ್‌ನಲ್ಲೂ ಇಸ್ರೇಲ್‌ ದೂತಾವಾಸವಿದ್ದು, ಕರ್ನಾಟಕಕ್ಕೆ ಗೃಹ ಸಚಿವಾಲಯ ಈ ಕುರಿತ ಸೂಚನೆ ರವಾನಿಸಿರುವುದು ಮಹತ್ವ ಪಡೆದಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಇಸ್ರೇಲ್‌ ನ ರಾಯಭಾರಿ ಕಚೇರಿ ಸೇರಿದಂತೆ ಇತರೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವರ್ಷಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಯಬಹುದೆನ್ನಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited