ಬೆಂಗಳೂರು : ಸೋಮಾರಿಗಳು, ಐಶಾರಾಮಿ ಜೀವನ ನಡೆಸುವವರು ಯೋಗಾಭ್ಯಾಸ ಮಾಡಿಕೊಳ್ಳಲಿ. ಶ್ರಮಜೀವಿಗಳಿಗೆ, ಕೂಲಿಕಾರ್ಮಿಕರಿಗೆ ಯೋಗದ ಅಗತ್ಯವಿಲ್ಲ ಎಂದು ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿಕೆ ನೀಡಿದ್ದಾರೆ. ಇದಕ್ಕೆ ಅವರದ್ದೇ ಸರ್ಕಾರದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತಂತೆ ಸುದ್ದಿಗಾರ ಜತೆ ಮಾತನಾಡಿದ ಹೆಚ್.ಆಂಜನೇಯ, ಸೋಮಾರಿಗಳು, ಶ್ರೀಮಂತರು ಬೇಕಾದರೆ ಯೋಗಾಭ್ಯಾಸ ಮಾಡಿಕೊಳ್ಳಲಿ. ಶ್ರಮ ಜೀವಿಗಳಿಗೆ ಅದರ ಅಗತ್ಯವಿಲ್ಲ ಎಂದಿದ್ದಾರೆ. ಯೋಗ ದಿನಾಚರಣೆಯನ್ನು ನಾನು ವಿರೋಧಿಸಲ್ಲ. ಸೋಮಾರಿಗಳಾದವರು ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದರು.
ಯೋಗಾಭ್ಯಾಸ ಕುರಿತಂತೆ ಹೇಳಿಕೆ ನೀಡಿರುವ ಸಚಿವ ಆಂಜನೇಯ ವಿರುದ್ಧ ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಜನೇಯ ಹೇಳಿಕೆ ಅನ್ ಫಾರ್ಚುನೇಟ್ ಎಂದ ದೇಶಪಾಂಡೆ, ನಾನು ಸಹ ದಿನ ಯೋಗ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವೇಗೌಡರು ಯೋಗ ಮಾಡುತ್ತಾರೆ. ಹಾಗಾದರೆ ನಾವೆಲ್ಲಾ ಸೋಮಾರಿಗಳಾ? ಎಂದು ಪ್ರಶ್ನಿಸಿದ್ದಾರೆ.