ನವದೆಹಲಿ : ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಹೊಂದಿರುವ ಆರೋಪದಲ್ಲಿ ಬಂಧಿತರಾದ ಜಿತೇಂದ್ರ ಸಿಂಗ್ ತೋಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ದೆಹಲಿ ಸರ್ಕಾರದ ಕಾನೂನು ಸಚಿವ ಸ್ಥಾನಕ್ಕೆ ಕಪಿಲ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.
ದೆಹಲಿಯ ಜಲಮಂಡಳಿ ಅಧ್ಯಕ್ಷರಾಗಿದ್ದ ಆಪ್ ಶಾಸಕ ಕಪಿಲ್ ಮಿಶ್ರಾ ಅವರನ್ನು ನೂತನ ಕಾನೂನು ಸಚಿವರನ್ನಾಗಿ ನೇಮಿಸಲಾಗಿದೆ. ಮಿಶ್ರಾ ಅವರು ದೆಹಲಿಯ ಕಾರ್ವಾಲ್ ಕ್ಷೇತ್ರದಿಂದ 44 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
'ಯೂತ್ ಪಾರ್ ಜಸ್ಟಿಸ್' ಎಂಬ ಯುವ ಸಂಘಟನೆಯನ್ನು ಹುಟ್ಟು ಹಾಕಿ ಹೋರಾಟ ನಡೆಸಿದ್ದಾರೆ. ಕಾಮನ್ ವೆಲ್ತ್ ಹಗರಣದ ಕುರಿತಾಗಿ ಧನಿಯೆತ್ತಿದವರಲ್ಲಿ ವಿಶ್ರಾ ಅವರು ಮೊದಲಿಗರಾಗಿದ್ದು, 'ಕಾಮನ್ ವರ್ಸಸ್ ವೆಲ್ತ್'ಎಂಬ ಪುಸ್ತಕವನ್ನು ಹೊರತಂದು ಹಗರಣವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವನ್ನು ಮಿಶ್ರಾ ವಹಿಸಿದ್ದರು.