Untitled Document
Sign Up | Login    
Dynamic website and Portals
  
May 30, 2015

ಮೋದಿ ಎಫೆಕ್ಟ್ : 2014-15ಲ್ಲಿ ಆರ್ಥಿಕ ಬೆಳವಣಿಗೆ 7.3ಕ್ಕೆ ಏರಿಕೆ

ನವದೆಹಲಿ : ಉತ್ತಮ, ಪಾರದರ್ಶಕ ಆಡಳಿತ ಮತ್ತು ದೇಶದ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಮೊದಲ ವರ್ಷ ಉತ್ತಮ ಫಲಿತಾಂಶವನ್ನೇ ದೇಶಕ್ಕೆ ಕೊಟ್ಟಿದೆ. ದೇಶದ ಆರ್ಥಿಕ ಬೆಳವಣಿಗೆ 2014-15 ವಿತ್ತ ವರ್ಷದಲ್ಲಿ ಶೇ.7.3ಕ್ಕೆ ಹೆಚ್ಚಿದ್ದು, ದೇಶ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತ್ತಿರುವ ಸಾಂಕೇತವಾಗಿದೆ.

ಆರ್ಥಿಕ ಬೆಳವಣಿಗೆಯಲ್ಲಿ ಈಗ ಭಾರತ ಚೀನಾವನ್ನೂ ಮುಂದಿಕ್ಕಿದೆ. ಮುಂಬರುವ ವರ್ಷಗಳಲ್ಲಿ ಈ ಬೆಳವಣಿಗೆ ಇನ್ನಷ್ಟು ಬಲಗೊೞುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ನರು ಅಭಿಪ್ರಾಯಪಡುತ್ತಾರೆ.

2013-14 ಸಾಲಿನ ವಿತ್ತ ವರ್ಷದಲ್ಲಿ ಶೇ.6.9ರಷ್ಟಿದ್ದ ಆರ್ಥಿಕ ಬೆಳವಣಿಗೆ 2014-15 ವಿತ್ತ ವರ್ಷದಲ್ಲಿ ಶೇ.7.3ಕ್ಕೆ ಏರಲು ದೇಶದಲ್ಲಿ ಉತ್ಪಾದಕ ಮತ್ತು ಸೇವಾ ಕ್ಷೇತ್ರಗಳಲ್ಲಿ ಕಂಡುಬಂದ ಪ್ರಗತಿಯೇ ಕಾರಣ ಎನ್ನಲಾಗಿದೆ.

ಕೇಂದ್ರ ಅಂಕಿ ಅಂಶ ಕಛೇರಿ (ಸಿ.ಎಸ್.ಒ.) ಬಿಡುಗಡೆಗೊಳಿಸಿದ ಮಾಹಿತಿಯಂತೆ 2011-12 ರ ವಿತ್ತ ವರ್ಷವನ್ನು ತಳಹದಿಯಾಗಿಟ್ಟುಕೊಂಡು ಪರಿಷೃತಗೊಂಡ ರಾಷ್ಠ್ರೀಯ ಆರ್ಥಿಕ ಗಣಕ ನೀತಿಯ ಪ್ರಕಾರ 2013-14 ವಿತ್ತೀಯ ವರ್ಷದಲ್ಲಿ ದೇಶ 6.9ರ ಬೆಳವಣಿಗೆ ಸಾಧಿಸಿದೆ.

ಕಳೆದ ವಿತ್ತ ವರ್ಷದ ಕೊನೆಯ ಮೂರು ತಿಂಗಳುಗಳಲ್ಲಿ (ಜನವರಿ-ಮಾರ್ಚ್) ಆರ್ಥಿಕ ಪ್ರಗತಿ ಶೇ.7.5 ದಾಖಲಾಗಿದ್ದು, ಇದು ಆ ಹಿಂದಿನ ಮೂರು ತಿಂಗಳುಗಳ (ಒಕ್ಟೋಬರ್-ಡಿಸೆಂಬರ್) ಪ್ರಗತಿಗಿಂತ ಸಾಕಷ್ಟು ಹೆಚ್ಚಳ ಕಂಡಿದೆ.

ದೇಶದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಪ್ರಗತಿ ಕಂಡು ಬಂದಿದ್ದು, ಹಿಂದಿನ ವರ್ಷ ಶೇ.2.5ರಷ್ಟು ಇದ್ದಿದ್ದು 4.8ಕ್ಕೆ ಏರಿಕೆಯಾಗಿದೆ. ರಿಯಲ್ ಎಸ್ಟೇಟ್ ಹಾಗೂ ಸೇವಾ ಕ್ಷೇತ್ರಗಳು ಸಹ ಉತ್ತಮ ಬೆಳವಣಿಗೆ ಸಾಧಿಸಿವೆ.

ಆದರೆ, ಕೃಷಿ ಕ್ಷೇತ್ರ ಮಾತ್ರ ನಿರೀಕ್ಷಿತ ಮಟ್ಟದ ಬೆಳವಣಿಗೆ ಕಂಡಿಲ್ಲ. ಈ ಕ್ಷೇತ್ರ ಕೇವಲ ಶೇ.0.2 ರ ಪ್ರಗತಿಯನ್ನಷ್ಟೇ ಸಾಧಿಸಿದ್ದು ಇದು ಆತಂಕದ ವಿಷಯವಾಗಿದೆ.

ಪ್ರಧಾನಿ ಮೋದಿಯವರ ಮೇಕ್-ಇನ್-ಇಂಡಿಯಾ ಯೋಜನೆಯಂತೆ ಮುಂದಿನ ವರ್ಷಗಳಲ್ಲಿ ದೇಶಕ್ಕೆ ಸಾಕಷ್ಟು ವಿದೇಶಿ ತಂತ್ರಜ್ನಾನ ಮತ್ತು ಬಂಡವಾಳ ಹರಿದು ಬರುವ ಸಾಧ್ಯತೆಯಿದ್ದು, ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಸರ್ವತೋಮುಖ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited