ಚೆನ್ನೈ : ತಮಿಳುನಾಡು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರದಾನ ಕಾರ್ಯದರ್ಶಿ ಜಯಲಲಿತಾ ಆರ್.ಕೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅಧಿೃಕೃತವಾಗಿ ಘೋಷಿಸಲಾಗಿದೆ.
ಈ ಕುರಿತು ಎಐಎಡಿಎಂಕೆ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಜೂನ್ 27 ರಂದು ಉಪ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ ನಂತರ ಆರ್.ಕೆ ನಗರ ಶಾಸಕ ಪಿ. ವಟ್ರಿವೇಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜಯಲಲಿತಾಗೆ ತಮ್ಮ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ.
ಡಿಎಂಕೆ, ಪಿಎಂಕೆ, ಮತ್ತು ವಿಸಿಕೆ ಪಕ್ಷಗಳು ಈಗಾಗಲೇ ಬೇರೆ ಬೇರೆ ಕಾರಣಗಳನ್ನು ನೀಡಿ ಉಪ ಚುನಾವಣೆಯಿಂದ ಹಿಂದೆ ಸರಿದಿವೆ. ಇನ್ನು ಬಿಜೆಪಿ, ಡಿಎಂಡಿಕೆ, ಸಿಪಿಎಂ, ಮತ್ತು ಸಿಪಿಐ ಪಕ್ಷಗಳು ತಮ್ಮ ನಿಲುವನ್ನು ಇನ್ನಷ್ಟೇ ತಿಳಿಸಬೇಕಾಗಿದೆ.
ತಮಿಳುನಾಡಿನಲ್ಲಿ ಜೂನ್ 10 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನ್ 11 ಮತ್ತು 12 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜೂನ್ 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.