Untitled Document
Sign Up | Login    
Dynamic website and Portals
  
May 29, 2015

ತಮಿಳುನಾಡು ಉಪ ಚುನಾವಣೆ: ಆರ್.ಕೆ ನಗರದಿಂದ ಜಯಲಲಿತಾ ಸ್ಪರ್ಧೆ

ಜಯಲಲಿತಾ ಜಯಲಲಿತಾ

ಚೆನ್ನೈ : ತಮಿಳುನಾಡು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರದಾನ ಕಾರ್ಯದರ್ಶಿ ಜಯಲಲಿತಾ ಆರ್.ಕೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅಧಿೃಕೃತವಾಗಿ ಘೋಷಿಸಲಾಗಿದೆ.

ಈ ಕುರಿತು ಎಐಎಡಿಎಂಕೆ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಜೂನ್ 27 ರಂದು ಉಪ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ ನಂತರ ಆರ್.ಕೆ ನಗರ ಶಾಸಕ ಪಿ. ವಟ್ರಿವೇಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜಯಲಲಿತಾಗೆ ತಮ್ಮ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ.

ಡಿಎಂಕೆ, ಪಿಎಂಕೆ, ಮತ್ತು ವಿಸಿಕೆ ಪಕ್ಷಗಳು ಈಗಾಗಲೇ ಬೇರೆ ಬೇರೆ ಕಾರಣಗಳನ್ನು ನೀಡಿ ಉಪ ಚುನಾವಣೆಯಿಂದ ಹಿಂದೆ ಸರಿದಿವೆ. ಇನ್ನು ಬಿಜೆಪಿ, ಡಿಎಂಡಿಕೆ, ಸಿಪಿಎಂ, ಮತ್ತು ಸಿಪಿಐ ಪಕ್ಷಗಳು ತಮ್ಮ ನಿಲುವನ್ನು ಇನ್ನಷ್ಟೇ ತಿಳಿಸಬೇಕಾಗಿದೆ.

ತಮಿಳುನಾಡಿನಲ್ಲಿ ಜೂನ್ 10 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನ್ 11 ಮತ್ತು 12 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜೂನ್ 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited