ನವದೆಹಲಿ : 4 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಮತ್ತು ಇಬ್ಬರು ರಾಜ್ಯಪಾಲರನ್ನು ವರ್ಗ ಮಾಡಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶದ ಅನ್ವಯ, ದ್ರೌಪದಿ ಮುರ್ಮು ಅವರನ್ನು ಜಾರ್ಖಂಡ್ ಗೆ, ತಥಾಗತ ರಾಯ್ ಅವರನ್ನು ತ್ರಿಪುರಾಕ್ಕೆ, ಜೆ.ಪಿ.ರಖೊವಾ ಅವರನ್ನು ಅರುಣಾಚಲ ಪ್ರದೇಶಕ್ಕೆ ಮತ್ತು ವಿ. ಷಣ್ಮುಗನಾಥನ್ ಅವರನ್ನು ಮೇಘಾಲಯ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಇನ್ನು ಜಾರ್ಖಂಡ್ ರಾಜ್ಯಪಾಲರಾಗಿದ್ದ ಸೈಯ್ಯದ್ ಅಹಮದ್ ಅವರನ್ನು ಮಣಿಪುರಕ್ಕೆ ಮತ್ತು ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದ ಲೆಫ್ಟಿನೆಂಟ್ ಜನರಲ್ ಶರ್ಮಾ ಅವರನ್ನು ಮಿಜೋರಂಗೆ ವರ್ಗಾವಣೆ ಮಾಡಲಾಗಿದೆ.