BW News Bureau : ಅಬ್ಬಿಗೆರೆ, ಎಸ್.ಆರ್.ಎಸ್ ಪೀಣ್ಯ, ಪ್ಲಾಟಿನಂ ಸಿಟಿ ಸೇರಿದಂತೆ ಕೆಲವೆಡೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಮೇ 11ರಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬೆಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಸ್ಎನ್ಆರ್, ಆಸ್ಕರ್ ಉದ್ಯೋಗ, ಕೃಷ್ಣ ಡೈಮಂಡ್, ಬಿಟಿ ಪುರ, ಬಿ.ಬಿ. ರಸ್ತೆ, ಶೋಭಾ ಡೆವಲಪರ್, ಭುವನೇಶ್ವರಿನಗರ, ಜಕ್ಕೂರು ಲೇಔಟ್, ಯುಎಎಸ್ ಲೇಔಟ್, ಭುವನೇಶ್ವರಿನಗರ, ವೆಂಕಟೆಗೌಡ ಲೇಔಟ್, ಪಂಪ ಎಕ್ಸ್ಟೆನ್ಶನ್, ಚಿರಂಜೀವಿ ಲೇಔಟ್, ಆಂಜನೇಯ ದೇವಸ್ಥಾನ ಕೆಂಪಾಪುರ, ಯೋಗೇಶನಗರ, ಅಟ್ಟೂರು ಲೇಔಟ್, ಸಂತೋಷನಗರ, ಮುನೇಶ್ವರ ಲೇಔಟ್, ಸ್ವಾಗತ ಲೇಔಟ್, ತಿರುಮಲಾಡಾಬಾ, ವೀರಸಾಗರ, ದೊಡ್ಡಬೆಟ್ಟನಹಳ್ಳಿ ಲೇಔಟ್, ಸಿಬಿ ಹಳ್ಳಿ,ಆದಿತ್ಯನಗರ, ಸಾಯಿನಗರ, ಮಾತೃ ಲೇಔಟ್, ಸೋಮೇಶ್ವರನಗರ, ಜ್ಯುಡಿಷಿಯಲ್ ಲೇಔಟ್, ಎನ್ಸಿಬಿಎಸ್, ಜಿಕೆವಿಕೆ ಕ್ಯಾಂಪಸ್, ಹಳೇ ಕೆ.ಜಿ. ಹಳ್ಳಿ, ಕೈವಾರ ದೇವಸ್ಥಾನ, ಶೆಟ್ಟಿಹಳ್ಳಿ ರಸ್ತೆ, ರಾಘವೇಂದ್ರ ಲೇಔಟ್, ಲಕ್ಷ್ಮಿಪುರ, ಲಕ್ಷ್ಮಿಪುರ ಹಳ್ಳಿ,ಸಿ.ಎಸ್.ಆರ್. ಲೇಔಟ್, ಆರ್.ಕೆ.ಆರ್. ಲೇಔಟ್, ವಿನಾಯಕ ಲೇಔಟ್, ದೊಡ್ಡಮ್ಮ ಲೇಔಟ್, ರತ್ನಮ್ಮ ಲೇಔಟ್, ಮನೋರಾಯನ ಪಾಳ್ಯ ಮೊದಲಾದವಕಡೆಗಳಲ್ಲಿ ವಿದ್ಯುತ್ ಇರುವುದಿಲ್ಲ.
ಇನ್ನು ಶಾಂಪುರ, ಆದರ್ಶನಗರ, ಆನಂದ ಗೋಕುಲ ಲೇಔಟ್, ಮುನೇಶ್ವರ ಲೇಔಟ್ನಲ್ಲಿ ವಿದ್ಯುತ್ ಇರುವುದಿಲ್ಲ. ಅದೇ ರೀತಿ ಗಾಂಧಿನಗರ, ಸುಧಾಮನ ನಗರ, ಕುಶಾಲನಗರ, ಅನ್ವರ್ ಲೇಔಟ್, ಬಸವನಗರ, ಡಾ.ಅಂಬೇಡ್ಕರ್ ಕಾಲೇಜು ಮತ್ತು ಆಸ್ಪತ್ರೆ, ಡಿ.ಜೆ. ಹಳ್ಳಿ, ಭೀಮಣ್ಣ ಲೇಔಟ್, ವೆಂಕಟೇಶಪುರ ರಸ್ತೆ, ಇನ್ಕಮ್ ಟ್ಯಾಕ್ಸ್ ಲೇಔಟ್, ಪಿ ಆಂಡ್ ಟಿ ಕಾಲೋನಿ, ಚಿನ್ನಣ್ಣ ಲೇಔಟ್, ರತನ್ಸಿಂಗ್ ಲೇಔಟ್, ಎಂ.ಎಂ. ಲೇಔಟ್, ಮುಸ್ಲಿಂ ಕಾಲೋನಿ, ಸಂಪಂಗಿರಾಮಯ್ಯ ಬ್ಲಾಕ್, ಕಾಫಿ ಮಂಡಳಿ ಕಾಲೋನಿ, ಕನಕನಗರ, ಸೀತಪ್ಪ ಲೇಔಟ್, ವಿ. ನಾಗೇನಹಳ್ಳಿ, ಭುವನೇಶ್ವರಿನಗರ, ಪಟೇಲ್ ಮುನಿಯಪ್ಪ ಲೇಔಟ್, ಕಾವೇರಿನಗರ ಸುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.