ನವದೆಹಲಿ : ವಿಲೇವಾರಿ ಮಾಡದ ಕಸವನ್ನು ಅಥವಾ ಅನುಪಯುಕ್ತ ವಸ್ತುಗಳನ್ನು ರಸ್ತೆ ಬದಿಯಲ್ಲಿ ತಂದು ಸುಡುವುದನ್ನು ಸಮಾನ್ಯವಾಗಿ ಗಮನಿಸಿರುತ್ತೀರಿ.. ಇನ್ನು ಮುಂದೆ ಇಂತಹ ಕೆಲಸಗಳಿಗೆ ಕತ್ತರಿ ಬೀಳಲಿದೆ. ನಮ್ಮನ್ನು ಯಾರು ಕೇಳುತ್ತಾರೆ ಎಂದು ಮೊಂಡುತನದಿಂದ ಕಸವನ್ನು ರಸ್ತೆ ಬದಿಯಲ್ಲೇ ಸುಟ್ಟರೆ ಬರೋಬ್ಬರಿ 5000 ರೂಪಾಯಿ ದಂಡ ತೆರಬೇಕಾಗುತ್ತದೆ.
ನ್ಯಾ.ಸ್ವತಂತ್ರ ಕುಮಾರ್ ಅವರಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್.ಜಿ.ಟಿ) ಈ ಹೊಸ ಆದೇಶವನ್ನು ಹೊರಡಿಸಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ದೆಹಲಿ, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಸರ್ಕಾರ ಹಾಗೂ ಸಾರ್ವಜನಿಕ ಇಲಾಖೆಗಳಿಗೆ ಸೂಚನೆ ನೀಡಿದೆ.
ಬಯಲಿನಲ್ಲಿ ಕಸ, ತ್ಯಾಜ್ಯವಸ್ತು&id=18121'>ತ್ಯಾಜ್ಯವಸ್ತುಗಳನ್ನು ಸುಡುವುದರಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತದೆ. ಅಲ್ಲದೇ ಇದರಿಂದಾಗಿ ಸಾರ್ವಜನಿಕರಿಗೆ ಶ್ವಾಸಕೋಶ ಸಂಬಂಧಿತ ರೋಗಗಳು ಹರಡುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಮಂಡಳಿ ತಿಳಿಸಿದೆ. ತ್ಯಾಜ್ಯವಸ್ತು&id=18121'>ತ್ಯಾಜ್ಯವಸ್ತುಗಳನ್ನು, ರಬ್ಬರ್ ವಸ್ತುಗಳನ್ನು ಬಯಲಿನಲ್ಲಿ ಸುಡುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಬೇಕೆಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
ಒಂದು ವೇಳೆ ಯಾರಾದರೂ ಮೊಂಡುತನದಿಂದ ಕಸವನ್ನು ಬಯಲಿನಲ್ಲೇ ಸುಡುತ್ತಿರುವುದು ಗಮನಕ್ಕೆ ಬಂದರೆ ಸ್ಥಳಿಯ ನಗರ ಪಾಲಿಕೆಗೆ ದೂರು ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ನೀಡಿದ್ದು ಇದಕ್ಕಾಗಿಯೇ ಪ್ರತ್ಯೇಕ ದೂರವಾಣಿ ಸಂಖ್ಯೆ (9717593474) ಯನ್ನು ನೀಡಲಾಗಿದೆ. ದೂರನ್ನು ಎರಡು ದಿನಗಳಲ್ಲಿ ಬಗೆ ಹರಿಸಬೇಕೆಂದು ನಗರ ಪಾಲಿಕೆಗಳಿಗೆ ನ್ಯಾಯಮಂಡಳಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿಯಾಗದೇ ಗಾರ್ಬೇಜ್ ಸಿಟಿ ಎಂಬ ಅಪಖ್ಯಾತಿಗೆ ಗುರಿಯಾಗಿರುವ ಬೆಂಗಳೂರಿನ ಮಟ್ಟಿಗೆ ಇದು ಮಹತ್ವದ ತೀರ್ಪಾಗಿದೆ. ಮಂಡೂರು, ಮಾವಳ್ಳಿಪುರ ಸೇರಿದಂತೆ ಹವಲು ತ್ಯಾಜ್ಯಘಟಕಗಳಲ್ಲಿ, ತ್ಯಾಜ್ಯ ವಿಲೇವಾರಿಯಾಗದೇ ಇದ್ದರೆ, ದಹನ ಮಾಡುವ ಪ್ರಕ್ರಿಯೆ ಸಾಮಾನ್ಯವಾಗಿತ್ತು. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಬೀದಿಗಿಳಿದಿದ್ದ ಗ್ರಾಮಸ್ಥರು, ತಮ್ಮ ಊರಿನಲ್ಲಿ ತ್ಯಾಜ್ಯ ಸುರಿಯುವುದನ್ನು ತೀವ್ರವಾಗಿ ವಿರೋಧಿಸಿದ್ದರು.