ಕಠ್ಮಂಡು : ಭೀಕರ ಭೂಪಂಕಕ್ಕೆ ನಲುಗಿ ಹೋಗಿರುವ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಸಿಲುಕಿಕೊಂಡಿದ್ದ 68 ಮಂದಿ ಕನ್ನಡಿಗರೂ ಸೇರಿದಂತೆ 500ಕ್ಕೂ ಹೆಚ್ಚು ಭಾರತೀಯನ್ನು ರಕ್ಷಿಸಿ ಭಾರತಕ್ಕೆ ವಾಪಾಸು ಕರೆತರುವಲ್ಲಿ ಭಾರತೀಯ ವಾಯುಪಡೆ ಯಶಸ್ವಿವಾಗಿವೆ.
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗಿಳಿದಿರುವ ವಾಯುಪಡೆಯ 4 ವಿಮಾನಗಳಲ್ಲಿ ಶನಿವಾರ ರಾತ್ರಿಯಿಂದ ನಡೀದ ಕಾರ್ಯಾಚರಣೆಯಲ್ಲಿ 500 ಮಂದಿಯನ್ನು ಸುರಕ್ಷಿತವಾಗಿ ನವದೆಹಲಿಗೆ ತಂದು ಬಿಡಲಾಗಿದೆ.
ನೀರು ,ಆಹಾರ ಸಾಮಗ್ರಿ ,ಔಷಧಿಗಳನ್ನು ಮತ್ತು ರಕ್ಷಣಾ ಸಿಬ್ಬಂದಿಗಳನ್ನು ಹೊತ್ತಿರುವ 10 ವಾಯುಪಡೆಯ ವಿಮಾನಗಳು ನೇಪಾಳವನ್ನು ತಲುಪಿದ್ದು, ಆಪರೇಷನ್ ಮೈತ್ರಿ ಹೆಸರಿನ ರಕ್ಷಣಾ ಕಾರ್ಯಾಚರಣೆ ನಿರತವಾಗಿದೆ.
14 ವರ್ಷದ ಒಳಗಿನ ಬಾಲಕಿಯರ ಪುಟ್ ಬಾಲ್ ತಂಡದ ಆಟಗಾರ್ತಿಯರು ನೇಪಾಳದಲ್ಲಿ ಸಿಲುಕಿಕೊಂಡಿದ್ದು ಅವರನ್ನು ಸುರಕ್ಷಿತವಾಗಿ ವಾಪಾಸ್ ಕರೆತರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಿದೇಶಾಂಗ ವ್ಯಾವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಈ ನಡುವೆ, ನೇಪಾಳದಲ್ಲಿ ಘೋರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2,500ರ ಗಡಿ ದಾಟಿದೆ. ಕಾಠ್ಮಂಡು ಕಣಿವೆಯೊಂದರಲ್ಲೇ 1,053 ಜನ ಸೇರಿದಂತೆ ನೇಪಾಲದಲ್ಲಿ ಈವರೆಗೆ 2,500 ಮಂದಿ ಬಲಿಯಾಗಿದ್ದು, 5,654 ಮಂದಿ ಗಾಯಗೊಂಡಿದ್ದಾರೆ. ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ. ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ಸಾವಿರಾರು ಮಂದಿ ಆಸ್ಪತ್ರೆಗೆ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದೆ. ನೆಲದ ಮೇಲೆ, ಆಸ್ಪತ್ರೆ ಮುಂಭಾಗದಲ್ಲೆಲ್ಲ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅವಶೇಷಗಳ ತೆರವು ಕಾರ್ಯಾಚರಣೆ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರುವ ಎಲ್ಲ ಸಾಧ್ಯತೆಗಳಿವೆ. ಕಳೆದ 24 ತಾಸುಗಳಿಂದ ನೇಪಾಲದ ಬಹುತೇಕ ಕಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಇನ್ನೂ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎನ್ನಲಾಗಿದೆ. ಈ ನಡುವೆ, ನೇಪಾಲದ ಪುನಾರಚನೆಗೆ ನೇಪಾಲ ಸರಕಾರ 50 ಕೋಟಿ ರೂಪಾಯಿ ನಿಧಿ ಸ್ಥಾಪಿಸಿದೆ.