Untitled Document
Sign Up | Login    
Dynamic website and Portals
  
April 24, 2015

ಎಸ್.ಆರ್ ಹಿರೇಮಠ್ ಸರ್ಕಾರದ ಪ್ರತಿನಿಧಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ: ಜಾರ್ಜ್

ಗೃಹ ಸಚಿವ ಕೆ.ಜೆ ಜಾರ್ಜ್ ಗೃಹ ಸಚಿವ ಕೆ.ಜೆ ಜಾರ್ಜ್

ಬೆಂಗಳೂರು : ತಮ್ಮ ವಿರುದ್ಧ ಭೂ ಅಕ್ರಮ ಆರೋಪ ಮಾಡಿರುವ ಎಸ್.ಆರ್ ಹಿರೇಮಠ್ ವಿರುದ್ಧ ಕೆ.ಜೆ.ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಜಾರ್ಜ್ ಹೇಳಿದ್ದಾರೆ.

ಎಸ್.ಆರ್ ಹಿರೇಮಠ್ ಸರ್ಕಾರದ ಪ್ರತಿನಿಧಿಗಳನ್ನು ಟಾರ್ಗೆಟ್ ಮಾಡುತ್ತಿದ್ದು ಹಿರೇಮಠ್ ಅವರು ಹಿಟ್ಲರ್ ಸರ್ಕಾರದಲ್ಲಿದ್ದ ಗೋಬೆಲ್ಸ್ ಅವತಾರದಂತೆ ವರ್ತಿಸುತ್ತಿದ್ದಾರೆ ಎಂದು ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಪತ್ನಿ ಖರೀದಿಸಿದ್ದ ನಿವೇಶನವನ್ನು ಮಾಲೀಕರಿಗೆ ಹಿಂತಿರುಗಿಸಿಯಾಗಿದೆ. ಆದರೂ ಎಸ್.ಆರ್ ಹಿರೇಮಠ್ ತಮ್ಮ ವಿರುದ್ಧ ಅಕ್ರಮ ನಿವೇಶನ ಖರೀದಿ ಮಾಡಿರುವ ಆರೋಪ ಮಾಡುತ್ತಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ.

ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಪತ್ನಿ ಸೂಜಾ ಜಾರ್ಜ್ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಿಂದ ಅಕ್ರಮವಾಗಿ ನಿವೇಶನ ಖರೀದಿಸಿದ್ದಾರೆ, ಚುನಾವಣೆ ಪ್ರಮಾಣಪತ್ರದಲ್ಲಿ ಜಾರ್ಜ್ ಈ ವಿಷಯ ಮುಚ್ಚಿಟ್ಟು ಅಪರಾಧ ಎಸಗಿದ್ದಾರೆ ಎಂದು ಎಸ್.ಆರ್ ಹಿರೇಮಠ್ ಜಾರ್ಜ್ ವಿರುದ್ಧ ಆರೋಪ ಮಾಡಿದ್ದರು.

ಕೆ.ಜೆ ಜಾರ್ಜ್ 1992ರಲ್ಲಿ ಬಿಡಿಎ ಯಿಂದ ಜಿ ಕೆಟಗರಿ ನಿವೇಶನ ಪಡೆದಿದ್ದರು. ಹೀಗೆ ನಿವೇಶನ ಪಡೆದ ಬಳಿಕ ಅವರಾಗಲೀ ಅವರ ಕುಟುಂಬ ಸದಸ್ಯರಾಗಲೀ ಸರಕಾರ ಅಥವಾ ಗೃಹ ನಿರ್ಮಾಣ ಸಂಘಗಳಿಂದ ಮತ್ತೊಂದು ನಿವೇಶನ ಪಡೆಯುವಂತಿಲ್ಲ. ಆದರೆ ಪತ್ನಿ ಸೂಜಾ 2004ರಲ್ಲಿ ವೈಯಾಲಿಕಾವಲ್ ಸಂಘದಿಂದ ರೂ.8.40 ಲಕ್ಷಕ್ಕೆ ಅಕ್ರಮವಾಗಿ ಸೈಟ್ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited