ಪೇಶಾವರ್ : ಭಾರತ ನೆರೆಯ ಪಾಕಿಸ್ತಾನದ ನಂಬರ್ ವನ್ ಶತ್ರು ಎಂದು ಜಮಾತ್ ಉದ್ ದಾವಾದ ಮುಖ್ಯಸ್ಥ, ಉಗ್ರ ಹಫೀಜ್ ಸಯೀದ್ ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದಾನೆ.
ಪೇಶಾವರದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಯೀದ್, ಭಾರತಕ್ಕೆ ಪಾಕಿಸ್ತಾನವೇ ನಂಬರ್ ವನ್ ಗುರಿ. ಆ ನಿಟ್ಟಿನಲ್ಲಿ ಶೀಘ್ರವೇ ಭಾರತದ ವಿರುದ್ಧ ಜಿಹಾದ್ ನಡೆಸಬೇಕೆಂದು ಬಹಿರಂಗವಾಗಿ ಕರೆ ನೀಡಿದ್ದಾನೆ.
ಭಾರತದ ವಿರುದ್ಧ ಕಾಶ್ಮೀರಿಗಳು ನಡೆಸುತ್ತಿರುವ ಜಿಹಾದ್ ಗೆ ಪಾಕಿಸ್ತಾನ ಆರ್ಮಿ ಬೆಂಬಲಸುತ್ತಿದ್ದು, ನಮ್ಮ ಸಂಘಟನೆ ಕೂಡಾ ಪಾಕ್ ಆರ್ಮಿಗೆ ನೆರವು ನೀಡುತ್ತಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡ ಕೆಲವೇ ದಿನದ ಮೊದಲು ಈ ಹೇಳಿಕೆ ನೀಡಿದ್ದಾನೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಕಾಶ್ಮೀರಿಗಳ ಸ್ವಾತಂತ್ರ್ಯಕ್ಕೆ ನೆರವು ನೀಡುತ್ತಿರುವ ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನ ಆರ್ಮಿಗೆ ನಮ್ಮ ಬೆಂಬಲ ಇದೆ ಎಂದು ನಿಷೇಧಿತ ಜೆಯುಡಿ ಮುಖ್ಯಸ್ಥ, ಉಗ್ರ ಹಫೀಜ್ ಹೇಳಿದ್ದ.