ನವದೆಹಲಿ : 'ಕಾಶ್ಮೀರ'ದಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಮಸರತ್ ಆಲಂ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ಧಾವಿಸಿದ ಬೆನ್ನಲ್ಲೇ ಭಾರತಕ್ಕೆ ಬೇಕಾಗಿರುವ ಪ್ರಮುಖ ಉಗ್ರ ಸಯೀದ್ ಹಫೀಜ್ ಕೂಡ ನೆರವಿಗೆ ಧಾವಿಸಿದ್ದಾನೆ.
ಹಫೀಜ್ ಸಯೀದ್, ದೇಶವಿರೋಧಿ ವ್ಯಕ್ತಿಯಲ್ಲ ಬದಲಾಗಿ ಆತನೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಮಸರತ್ ಆಲಂ ವಿರುದ್ಧ ದಾಖಲಿಸಲಾಗಿರುವ ಪ್ರಕರಣವನ್ನು ಪಾಕಿಸ್ತಾನದ ವಿರುದ್ಧ ದಾಖಲಿಸರುವ ಪ್ರಕರಣದಂತೆಯೇ ಪರಿಗಣಿಸಬೇಕೆಂದು ಸಾರ್ವಜನಿಕ ಭಾಷಣದಲ್ಲಿ ಉಗ್ರ ಹಫೀಜ್ ಸಯೀದ್ ಕರೆ ನೀಡಿದ್ದಾನೆ.
ಹಫೀಜ್ ಸಯೀದ್, ದೆಹಲಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಿಲ್ಲ, ಪಾಕ್ ಧ್ವಜವನ್ನು ವಿವಾದಿತ ಪ್ರದೇಶವಾಗಿರುವ ಕಾಶ್ಮೀರದ ಶ್ರೀನಗರದಲ್ಲಿ ಹಾರಿಸಿದ್ದಾರೆ, ಆದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹಫೀಜ್ ಸಯೀದ್ ಹೆಳಿದ್ದಾನೆ.
ಮಸರತ್ ಆಲಂ ನನ್ನು ಯಾವ ಸೆಕ್ಷನ್ ಪ್ರಕಾರ ಬಂಧಿಸಲಾಗಿದೆ ಎಂದು ಪ್ರಶ್ನಿಸಿರುವ ಹಫೀಜ್ ಸಯೀದ್, ಪಾಕಿಸ್ತಾನ ಸರ್ಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಶ್ಮೀರದಲ್ಲಿರುವ ನಮ್ಮ ಬಾಂಧವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧವಿರುವುದಾಗಿ ಹಫೀಜ್ ಸಯೀದ್ ಹೇಳಿದ್ದಾನೆ.
ಇದೇ ವೇಳೆ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಉಗ್ರ, ಮುಸ್ಲಿಮರಿಗೆ ತೊಂದರೆಯಾದರೆ ತಾನು ಕಾಶ್ಮೀರಕ್ಕೆ ಬರುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಮಸರತ್ ಆಲಂ ಬಂಧನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಮಸರತ್ ಆಲಂ ಸಾಹೇಬರನ್ನು ಯಾವ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.