ಮುಂಬೈ : ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಳವಾಗುತ್ತಿರುವುದು ಹಿಂದೂ ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಹಾಗಾಗಿ ಅಲ್ಪಸಂಖ್ಯಾತರಿಗೆ ಕುಟುಂಬ ಯೋಜನೆ ಪದ್ಧತಿ ಅಗತ್ಯವಾಗಿ ಬೇಕಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಪ್ರತಿಪಾದಿಸಿದೆ.
ಏತನ್ಮಧ್ಯೆ ಸಾಧ್ವಿ ದೇವಾ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ರಿಗೆ ಬಲವಂತವಾಗಿ ಸಂತಾಹರಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಆಗ ಅವರ ಜನಸಂಖ್ಯೆ ಹೆಚ್ಚಳವಾಗುವುದಿಲ್ಲ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದರು.
ಈ ಹೇಳಿಕೆಗೆ ಕಿಡಿಕಾರಿರುವ ಶಿವಸೇನೆ, ಕುಟುಂಬ ಯೋಜನೆ ಬಗ್ಗೆ ಸಾಧ್ವಿ ಅರ್ಥವಾದರು ಏನು? ಸಂತಾನಹರಣ ಚಿಕಿತ್ಸೆಯನ್ನು ಬಾಯಿಗೆ ಬಂದಂತೆ ಹೇಳಬಾರದು. ಆದರೆ ಕುಟುಂಬ ಯೋಜನೆ, ಜನಸಂಖ್ಯೆ ನಿಯಂತ್ರಣ ಎರಡೂ ಒಂದೇ ಎಂದು ಸಂಪಾದಕೀಯದಲ್ಲಿ ಹೇಳಿದ್ದು, ಬೀದಿ ನಾಯಿಗೂ ಬಲವಂತದಿಂದ ಸಂತಾಹರಣ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಮನೇಕಾ ಗಾಂಧಿ ಅವುಗಳ ಪರ ಎದ್ದು ನಿಲ್ಲುತ್ತಾರೆ. ಆದರೆ ಒಂದು ದಿನ ಬೀದಿ ನಾಯಿ ಜನರನ್ನು ಕಚ್ಚುತ್ತದೆ ಎಂದು ಉಲ್ಲೇಖಿಸಿದೆ.
ಮುಸ್ಲಿಮ್ ಸಣ್ಣ ಕುಟುಂಬವಿದ್ದರೆ ಸಂತೋಷ ಮತ್ತು ಆರೋಗ್ಯಕರವಾಗಿ ಬದುಕಬಹುದು. ಆದರೆ ಸಂತಾಹರಣ ಶಸ್ತ್ರ ಚಿಕಿತ್ಸೆ ಬಗ್ಗೆ ನಾವು ಯಾವಾಗ ಬೇಡಿಕೆ ಇಡುತ್ತೇವೆ, ಕ್ಷಮಿಸಿ, ಕುಟುಂಬ ಯೋಜನೆ ಬಗ್ಗೆ. ಅದು ದೇಶದ ಮತ್ತು ಮುಸ್ಲಿಮ್ ಸಮುದಾಯದ ಹಿತಾಸಕ್ತಿಗೆ ಅನುಗುಣವಾಗಿ. ಇದರಿಂದ ಮಕ್ಕಳಿಗೆ ಒಳ್ಳೆಯ ಆಹಾರ, ಶಿಕ್ಷಣ ಮತ್ತು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಂಪಾದಕೀಯದಲ್ಲಿ ವಾದಿಸಿದೆ.