Untitled Document
Sign Up | Login    
Dynamic website and Portals
  
April 12, 2015

ರಾಜ್ಯಪಾಲರ ಪ್ರವಾಸಗಳಿಗೆ ಕೇಂದ್ರ ಸರ್ಕಾರ ಕಡಿವಾಣ

ನವದೆಹಲಿ : ಬಯಸಿದಾಗ ವಿದೇಶ ಪ್ರವಾಸ ಅಥವಾ ತಮ್ಮ ರಾಜ್ಯಕ್ಕೆ ಹೋಗುವ ರಾಜ್ಯಪಾಲರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಕಾರ್ಯನಿರ್ವಹಿಸುತ್ತಿರುವ ರಾಜ್ಯದಿಂದ ರಾಜ್ಯಪಾಲರು ಹೊರಕ್ಕೆ ಕಾಲಿಡುವ ಮುನ್ನ ರಾಷ್ಟ್ರಪತಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ರೂಪಿಸಿದೆ.

ವರ್ಷವೊಂದರಲ್ಲಿ 73ಕ್ಕಿಂತ ಹೆಚ್ಚು ದಿನಗಳನ್ನು ಕಾರ್ಯನಿರ್ವಹಿಸುವ ರಾಜ್ಯದಿಂದ ಹೊರಗೆ ಕಳೆಯುವಂತಿಲ್ಲ ಎಂಬುದು ಸೇರಿದಂತೆ 18 ಹೊಸ ನಿಯಮಗಳನ್ನು ರೂಪಿಸಿ ಕೇಂದ್ರ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ. ಕಡೇ ಕ್ಷಣದಲ್ಲಿ ಅನಿವಾರ್ಯವಾಗಿ ರಾಜ್ಯದಿಂದ ಹೊರಹೋಗಲೇ ಬೇಕು ಎಂದಾದಲ್ಲಿ ಅದಕ್ಕೆ ಸ್ಪಷ್ಟ ಕಾರಣಗಳನ್ನು ರಾಜ್ಯಪಾಲರು ನೀಡಲೇ ಬೇಕು ಎಂದು ನಿಯಮಗಳು ಹೇಳುತ್ತವೆ. ದೇಶೀಯ ಮಟ್ಟದಲ್ಲಿ ಅಧಿಕೃತ ಪ್ರವಾಸಕ್ಕೆ ತೆರಳುವ ಏಳು ದಿನಗಳ ಮುನ್ನ ಕಾರ್ಯಕ್ರಮ ಪಟ್ಟಿಯನ್ನು ಅಂತಿಮಗೊಳಿಸಿ ರಾಷ್ಟ್ರಪತಿ ಕಾರ್ಯಾಲಯದಿಂದ ಅನುಮತಿ ಪಡೆದುಕೊಳ್ಳಬೇಕು.

ವಿದೇಶ ಪ್ರವಾಸ ಕೈಗೊಳ್ಳುವ ಆರು ವಾರಗಳ ಮೊದಲು ರಾಷ್ಟ್ರಪತಿ ಭವನದಿಂದ ಸಮ್ಮತಿ ಗಳಿಸಿರಬೇಕು. ತುರ್ತು ಸಂದರ್ಭ ಎಂದೆನಿಸಿದರೂ ಈ ನಿಯಮದಲ್ಲಿ ಬದಲಾವಣೆ ಇಲ್ಲ. ಇದರ ಜತೆಗೆ ವಿದೇಶಾಂಗ ಸಚಿವಾಲಯ ಹಾಗೂ ಗೃಹ ಸಚಿವಾಲಯದ ಅನುಮತಿಯನ್ನೂ ಪಡೆದಿರಬೇಕು ಎಂದು ನಿಯಮ ಹೇಳುತ್ತದೆ.

ಕಾರ್ಯನಿರ್ವಹಿಸುತ್ತಿರುವ ರಾಜ್ಯದಿಂದ ಹೊರಗೆ ಖಾಸಗಿ ಪ್ರವಾಸ ಕೈಗೊಳ್ಳುವ ಎರಡು ವಾರಗಳ ಮೊದಲು ರಾಷ್ಟ್ರಪತಿಗಳ ಕಚೇರಿಯಿಂದ ಅನುಮತಿ ಪಡೆದಿರಬೇಕು. ವಿದೇಶ ಪ್ರವಾಸಕ್ಕೆ ಖಾಸಗಿಯಾಗಿ ಹೋಗುವ 6 ಮುನ್ನ ರಾಷ್ಟ್ರಪತಿಗಳಿಗೆ ತಿಳಿಸಿರಬೇಕು ಎಂದು ನಿಯಮ ತಿಳಿಸುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited