ಚೆನ್ನೈ : 'ಕಮಲಹಾಸನ್' ಅವರ ಬಹುನಿರೀಕ್ಷಿತ ಉತ್ತಮ ವಿಲನ್ ಚಿತ್ರವನ್ನು ನಿಷೇಧಿಸಬೇಕೆಂದು ವಿಶ್ವಹಿಂದೂ ಪರಿಷತ್ ಸಂಘಟನೆ ಆಗ್ರಹಿಸಿದೆ.
ಉತ್ತಮ ವಿಲನ್ ಚಿತ್ರದಲ್ಲಿ ಇರನಿಯಾನ್ ನಾದಗಮ್ ಎಂಬ ಹಾಡಿನಲ್ಲಿ ಪ್ರಹಲ್ಲಾದ ಹಾಗೂ ಹಿರಣ್ಯಕಶ್ಯಪನ ನಡುವಿನ ಸಂಭಾಷಣೆ ಹೀಗಳೆಯಲಾಗಿದೆ. ಇದರಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆಯುಂಟಾಗುತ್ತಿದೆ ಎಂದು ವಿ.ಹೆಚ್.ಪಿ ಸಂಘಟನೆ ಪೊಲೀಸ್ ಕಮಿಷನರ್ ಗೆ ದೂರು ನೀಡಿದೆ.
ಹಾಡಿನ ಸಾಹಿತ್ಯ ವಿಷ್ಣುವಿನ ಆರಾಧಕರ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತದೆ. ಈ ಹಾಡಿನಲ್ಲಿ ಹಿರಣ್ಯಕಶ್ಯಪ ಹಾಗೂ ಪ್ರಹಲ್ಲಾದನ ನಡುವಿನ ಸಂಭಾಷೆಣೆಯನ್ನು ಹೀನವಾಗಿ ಅರ್ಥೈಸಲಾಗಿದೆ. ಆದ್ದರಿಂದ ಚಿತ್ರವನ್ನು ನಿಷೇಧಿಸಬೇಕೆಂದು ವಿ.ಹೆಚ್.ಪಿ ಆಗ್ರಹಿಸಿದೆ.
ಉತ್ತಮ ವಿಲನ್ ಚಿತ್ರವನ್ನು ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ನಿರ್ದೇಶಿಸಿದ್ದು, ಕಮಲಹಾಸನ್ ಅವರ ಬಹು ನಿರೀಕ್ಷಿತ ಚಿತ್ರವಾಗಿದೆ.