ನವದೆಹಲಿ : ಈ ಹಿಂದೆ ಅಸ್ಥಿತ್ವದಲ್ಲಿದ್ದ 49 ದಿನಗ ಆಪ್ ಸರ್ಕಾರ ಪತನವಾದ ನಂತರ ಮನೆಯನ್ನು ತೆರವುಗೊಳಿಸುವಂತೆ ಮನೀಷ್ ಸಿಸೋಡಿಯಾಗೆ ಸೂಚಿಸಿದ್ದ ಅಧಿಕಾರಿಯನ್ನು ಆಪ್ ಸರ್ಕಾರ ವರ್ಗಾವಣೆ ಮಾಡಿದೆ.
ಕಳೆದ ವರ್ಷ 49 ದಿನಗಳ ಸರ್ಕಾರ ನಡೆಸಿದ್ದ ಅರವಿಂದ್ ಕೇಜ್ರಿವಾಲ್ ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆಪ್ ಸರ್ಕಾರ ಪತನಗೊಂಡಿತ್ತು. 49 ದಿನಗಳ ಕಾಲ ಸಚಿವರಾಗಿದ್ದ ಮನೀಷ್ ಸಿಸೋಡಿಯಾಗೆ ಸರ್ಕಾರದಿಂದ ನೀಡಲಾಗಿದ್ದ ಮನೆಯನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಸೂಚನೆ ನೀಡಿದ್ದರು.
ಇದೀಗ ಅಧಿಕಾರಿಯನ್ನು ವರ್ಗಾವಣೆಗೊಳಿಸಲು ಆದೇಶ ನೀಡಿರುವ ಆಪ್ ಸರ್ಕಾರ ಅಧಿಕಾರಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ವರ್ಗಾವಣೆ ಮಾಡಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಬೇರೆ ಇಲಾಖೆಯಲ್ಲಿ ಕೆಲಸ ನೀಡಲಾಗಿಲ್ಲ.
ಇದೇ ವೇಳೆ ಮಹಿಳಾ ಗ್ರಂಥಪಾಲಕಿಯ ವಿರುದ್ಧವೂ ಆಪ್ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಪುಸ್ತಕಗಳನ್ನು ತಮಗೆ ನೀಡಬೇಕು ಎಂಬ ಆಪ್ ಕಾರ್ಯಕರ್ತರ ವರದಿಯನ್ನು ನಿರಾಕರಿಸಿದ್ದ ಕಾರಣಕ್ಕೆ ಗ್ರಂಥಪಾಲಕಿಯನ್ನೂ ವರ್ಗಾವಣೆಗೊಳಿಸಲಾಗಿದೆ.