ಅಮೇಠಿ : ಶೀಘ್ರದಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜನರ ಬಳಿ ವಾಪಸಾಗಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಫೆ.22ರಿಂದ ನಿಗೂಢ ರಜೆಯ ಮೇರೆ ತೆರಳಿದ್ದು, ಅವರು ಎಲ್ಲಿದ್ದಾರೆ ಎಂಬುದು ಈವರೆಗೂ ತಿಳಿದಿಲ್ಲ. ಈ ನಡುವೆ, ಸೋನಿಯಾ ಗಾಂಧಿ ಅವರು ರಾಹುಲ್ ವಾಪಸಾಗುವ ನಿರ್ದಿಷ್ಟ ಸಮಯವನ್ನು ತಿಳಿಸಲಿಲ್ಲ. ರಾಹುಲ್ ಕ್ಷೇತ್ರವಾದ ಅಮೇಠಿಯಲ್ಲಿ, ರೈಲ್ವೇ ಅಪಘಾತದಲ್ಲಿ ಮರಣಹೊಂದಿದ ಇಲ್ಲಿಯ ರೈತ ಮುಖಂಡನ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಸೋನಿಯಾ ಗಾಂಧಿ, ಶೀಘ್ಹ್ರದಲ್ಲಿಯೇ ರಾಹುಲ್ ವಾಪಸ್ ಆಗಲಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸೋನಿಯಾ ತಮ್ಮ ಕ್ಷೇತ್ರವಾದ ರಾಯ್ಬರೇಲಿಯಲ್ಲಿ ಅಕಾಲಿಕ ಮಳೆಯಿಂದ ನಷ್ಟಕ್ಕೊಳಗಾದ ರೈತರನ್ನು ಮತ್ತು ಬಚವಾನ್ ರೈಲು ದುರಂತದಲ್ಲಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು.