ವಾರಣಾಸಿ : ಆಮ್ ಆದ್ಮಿ ಪಕ್ಷದ ಸರ್ಕಾರ 'ರಾಜಕೀಯ ಅಪಕ್ವತೆ'ಗೆ ಬಲಿಯಾಗಿ ದೆಹಲಿ ಜನರ ಸೇವೆಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜನರು ಬಹಳಷ್ಟು ನಿರೀಕ್ಷೆಯಿಂದ ಈ ಸರ್ಕಾರಕ್ಕೆ ಮತ ಹಾಕಿದರು. ಅವರು ತಮ್ಮ ಚುನಾಣಾ ವಚನಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಇಟ್ಟಿದ್ದರು. ರಾಜಕೀಯ ಅಪಕ್ವತೆಯಿಂದ ಈ ಅವಕಾಶವನ್ನು ಎಎಪಿ ಸರ್ಕಾರ ಕಳೆದುಕೊಳ್ಳಬಾರದು" ಎಂದು ತಿಳಿಸಿದರು.
ಅರವಿಂದ್ ಕೇಜ್ರಿವಾಲ್ ಅವರ ಮಾತುಕತೆಯನ್ನು ರೆಕಾರ್ಡ್ ಮಾಡಿರುವ ಆಡಿಯೋ ಟೇಪ್ ಬಿಡುಗಡೆಯನ್ನು ಟೀಕಿಸಿದ ಜೇಟ್ಲಿ ಇದು ಹೊಸ ತರದ ರಾಜಕೀಯ ಎಂದಿದ್ದಾರೆ. "ಇಬ್ಬರು ರಾಜಕಾರಿಣಿಗಳ ಮಧ್ಯೆ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಳ್ಳುವುದು ಹೊಸ ರೀತಿಯ ರಾಜಕೀಯ, ಇದು ಸರಿಯಲ್ಲ" ಎಂದು ಹೇಳಿದ್ದಾರೆ.