ಬೆಂಗಳೂರು : ಹಿಂದೂ ಸಮಾಜೋತ್ಸವ ದಲ್ಲಿ ಭಾಗವಹಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ದ ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಜಕೀಯ ಪ್ರೇರಿತ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿರುವ ತೊಗಾಡಿಯಾ, ಮೈಸೂರಿನಲ್ಲಿ ನಾನು ಭಾಷಣ ಮಾಡುತ್ತೇನೆ ಎಂದು ವೈಯಕ್ತಿಕ ಹಿತಾಸಕ್ತಿಯಿಂದ ನನಗೆ ನಿರ್ಬಂಧ ವಿಧಿಸಲಾಗಿದೆ. ಮಾರ್ಚ್ 9 ರಂದು ಕರ್ನಾಟಕದ ಪೊಲೀಸರನ್ನು ಅಹಮದಾಬಾದ್ ನಲ್ಲಿ ನಾನು ಹತ್ತು ವರ್ಷದ ಹಿಂದೆ ತೊರೆದಿರುವ ನನ್ನ ನಿವಾಸ ಕಾರ್ನಾವತಿಯಲ್ಲಿ ನನ್ನ ಟ್ರಸ್ಟ್ ನಲ್ಲಿ ನಡೆಯುತ್ತಿರುವ ಆಸ್ಪತ್ರೆ ಮತ್ತು ವಿಎಚ್ ಪಿ ಕಚೇರಿಗೆ ಕೇವಲ ನನಗೆ ನೊಟೀಸ್ ನೀಡುವ ಸಲುವಾಗಿ ಕಳುಹಿಸಲಾಗಿದೆ. ನನ್ನನ್ನು ನಿಷೇಧಿಸುವ ಸಲವಾಗಿ ಪೊಲೀಸರನ್ನು ಗುಜರಾತ್ ಗೆ ಕಳುಹಿಸುವ ಅಗತ್ಯವಿರಲ್ಲಿಲ್ಲ. ಕರ್ನಾಟಕದ ವಿಎಚ್ಪಿ ಕಚೇರಿಗೆ ನೊಟೀಸ್ ನೀಡಿದರೆ ಸಾಕಿತ್ತು ಎಂದು ಪತ್ರದಲ್ಲಿ ಬರೆದಿದ್ದಾರೆ.
ಹೊಸೂರಿನಿಂದ ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಕರ್ನಾಟಕ ಪೊಲೀಸರು ನನಗೆ ಕಿರುಕುಳ ನೀಡಿದ್ದಾರೆ. ಸಿದ್ದರಾಮಯ್ಯನವರ ಈ ವರ್ತನೆ ನನಗೆ ಅಚ್ಚರಿ ತಂದಿದೆ ಎಂದು ಬರೆದಿದ್ದಾರೆ.
ರಾಜ್ಯ ಸರ್ಕಾರ ತೋಗಾಡಿಯಾ ಅವರು ಬೆಂಗಳೂರು,ಉಡುಪಿ,ಚಿಕ್ಕಮಗಳೂರು ಮತ್ತು ಮೈಸೂರು ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಿತ್ತು.