ಚೆನ್ನೈ : ಭಾರತೀಯ ಮೀನುಗಾರರು ಶ್ರೀಲಂಕಾ ಜಲಗಡಿ ದಾಟಿದರೆ ಗುಂಡು ಹಾರಿಸಿ ಸಾಯಿಸುವುದಾಗಿ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮಸಿಂಘೆ ಎಚ್ಚರಿಕೆ ನೀಡಿದ್ದಾರೆ.
ತಮಿಳು ನ್ಯೂಸ್ ಚಾನಲ್ ವೊಂದಕ್ಕೆ ಸಂದರ್ಶನ ನೀಡಿದ ಅವರು, ಒಂದು ವೇಳೆ ಭಾರತೀಯ ಮೀನುಗಾರರು ಶ್ರೀಲಂಕಾ ಜಲಗಡಿ ಪ್ರವೇಶಿಸಿದರೆ ಗುಂಡು ಹಾರಿಸುವುದಾಗಿ. ಶ್ರೀಲಂಕಾ ನೌಕಾಪಡೆ ಕೂಡ ಈ ಕಾನೂನು ಪಾಲಿಸುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶ್ರೀಲಂಕಾದಲ್ಲೇ ಇದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ ಇನ್ನೊಂದೆಡೆ ಉಭಯ ದೇಶಗಳ ಮೀನುಗಾರರು ಸಂದಾನ ಮಾತುಕತೆಯಲ್ಲಿ ನಿರತರಾಗಿದ್ದಾರೆ ಇದರ ಬೆನ್ನಲ್ಲೇ ಶ್ರೀಲಂಕಾ ಪ್ರಧಾನಿಯವರ ಈ ವಿವಾದಾತ್ಮಕ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಭಾರತೀಯ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀಲಂಕಾದ ಹೊಸ ಆಡಳಿತ ಭಾರತದ ಪರ ಉತ್ತಮ ಒಲವು ಹೊಂದಿದೆ ಎಂದು ಹೇಳಲಾಗುತ್ತಿತ್ತು. ಆದರೆ ವಿಕ್ರಮಸಿಂಘೆಯವರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಒಂದೊಮ್ಮೆ ಯಾರಾದೂರ ನನ್ನ ಮನೆಗೆ ಅಕ್ರಮವಾಗಿ ನುಗ್ಗಿದರೆ ನಾನು ಅವರ ಮೇಲೆ ಗುಂಡೆಸೆಯಬಹುದು. ನಾನು ಹಾಗೆ ಮಾಡುವಾಗ ಮನೆಯೊಳಗೆ ನುಗ್ಗಿ ಬಂದಾತ ಕೊಲ್ಲಲ್ಪಟ್ಟರೆ ನನಗೆ ಕಾನೂನಿನಲ್ಲಿ ಹಾಗೆ ಮಾಡುವುದಕ್ಕೆ ಅವಕಾಶವಿದೆ ಎಂದು ವಿಕ್ರಮಸಿಂಘೆ ಅವರು ತಂತಿ ಟಿವಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
'ಇದು ನಮ್ಮ ಸಾಗರ ವ್ಯಾಪ್ತಿಯ ಪ್ರದೇಶ. ಇಲ್ಲಿ ಜಾಫಾದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅವಕಾಶವಿದೆ. ಆದರೂ ನಾವು ಅವರನ್ನು ತಡೆದಿದ್ದೇವೆ. ಆದುದರಿಂದಲೇ ಇಲ್ಲಿಗೆ ಭಾರತೀಯ ಬೆಸ್ತರು ಅಕ್ರಮವಾಗಿ ಒಳ ನುಗ್ಗಿ ಬಂದು ಮೀನುಗಾರಿಕೆ ನಡೆಸುತ್ತಾರೆ. ಇದನ್ನು ನಿವಾರಿಸಲು ಜಾಫಾ ಮೀನುಗಾರರು ಈ ಬಗ್ಗೆ ಒಂದು ಒಪ್ಪಂದಕ್ಕೆ ಬರಲು ಸಿದ್ಧರಿದ್ದಾರೆ. ಆದುದರಿಂದ ನಾವು ಒಂದು ನ್ಯಾಯೋಚಿತ ಪರಿಹಾರೋಪಾಯವನ್ನು ಕಾಣಬೇಕಿದೆ. ಆದರೆ ಅದು ಉತ್ತರದ ಮೀನುಗಾರರ ಜೀವನಾಧಾರವನ್ನು ಕಸಿಯುವಂತಿರಬಾರದು' ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.