ಬೀದರ್ : ಭೂಸ್ವಾಧೀನ ಮಸೂದೆ ಮಂಡನೆ ವಿಚಾರದಲ್ಲಿ ಯೋಗಗುರು ಬಾಬಾ ರಾಮ್ ದೇವ್ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೀದರ್ ನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ ರಾಮ್ ದೇವ್, ಸುದ್ದಿಗಾರರೊಂದಿಗೆ ಮಾತನಾಡಿ ಭೂಸ್ವಾಧೀನ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಿ ಮಸೂದೆ ಮಂಡಿಸಬೇಕು ಎಂದಿದ್ದಾರೆ.
ಯಾರಿಗೂ ತೊಂದರೆಯಾಗದಂತೆ ಅಭಿವೃದ್ದಿ ಕಾರ್ಯಗಳು ನಡೆಸಬೇಕು ಎಂದು ಈ ವೇಳೆ ಅವರು ಸಲಹೆ ನೀಡಿದ್ದಾರೆ.
ಒಂದಡೆ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಿ ವಿಪಕ್ಷಗಳು, ಸದನಗಳಲ್ಲಿ ತೀವ್ರ ಗದ್ದಲ ಎಬ್ಬಿಸಿವೆ. ಇನ್ನೊಂದೆಡೆ ಭೂ ಸುಗ್ರೀವಾಜ್ಞೆ ವಿರುದ್ಧ ಅಣ್ಣಾ ಹಜಾರೆ ಹೋರಾಟಕ್ಕಿಳಿದಿದ್ದು, ದೆಹಲಿ ಸಿಎಂ ಕೇಜ್ರಿವಾಲ್ ಕೈ ಜೋಡಿಸಿದ್ದಾರೆ.
ಭೂಸ್ವಾಧೀನ ಮತ್ತು ವಿಮೆ ಸೇರಿದಂತೆ 6 ಸುಗ್ರೀವಾಜ್ಞೆಗಳು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅಂಗೀಕಾರವಾಗದೆ ಹೋದರೆಉಭಯ ಸದನಗಳ ಜಂಟಿ ಅಧಿವೇಶನ ಕರೆಯುವ ತಂತ್ರಗಾರಿಕೆ ಅನುಸರಿ ಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ.