ಜೋಧ್ ಪುರ : ಬಾಲಿವುಡ್ ನಟ 'ಸಲ್ಮಾನ್ ಖಾನ್' ವಿರುದ್ಧ ಇರುವ 1998ರ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ಜೋಧ್ ಪುರ ನ್ಯಾಯಾಲಯ ಮಾರ್ಚ್.3ರಂದು ಪ್ರಕಟಿಸಲಿದೆ.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.12ರಂದು ವಿಚಾರಣೆ ನಡೆಸಿ ಫೆ.25ಕ್ಕೆ ತೀರ್ಪು ಪ್ರಕಟಿಸಬೇಕಿತ್ತು. ಅಲ್ಲದೇ ತೀರ್ಪು ಪ್ರಕಟ ಮಾಡುವ ವೇಳೆ ಸಲ್ಮಾನ್ ಖಾನ್ ಗೆ ನ್ಯಾಯಾಲಯ ಸೂಚಿಸಿತ್ತು.
ಫೆ.25ರಂದು ತೀರ್ಪು ಪ್ರಕಟವಾಗುವ ವೇಳೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಸಲ್ಮಾನ್ ಖಾನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಮಾರ್ಚ್.3ಕ್ಕೆ ಮುಂದೂಡಿದೆ.
ರಾಜಾಸ್ಥಾನದಲ್ಲಿ ಹಮ್ ಸಾಥ್ ಸಾಥ್ ಚಿತ್ರದ ಚಿತ್ರೀಕರಣದ ವೇಳೆ ಕೃಷ್ಣಮೃಗ ಬೇಟೆ ಪ್ರಕರಣ ನಡೆದಿತ್ತು. ಸಲ್ಮಾನ್ ಜತೆಗೆ ಇತರ ನಟರಾದ ಸೈಫ್ ಅಲಿಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಕೂಡ ಆರೋಪಿಗಳಾಗಿದ್ದಾರೆ.