ಅಹಮದಾಬಾದ್ : ಪಾಕಿಸ್ತಾನ ಮೂಲದ ಶಂಕಿತ ಉಗ್ರರ ಬೋಟ್ ಅನ್ನು ಸ್ಫೋಟಿಸಲು ತಾನೇ ಆದೇಶ ನೀಡಿದ್ದಾಗಿ ಹೇಳಿಕೆ ನೀಡಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದ ಕರಾವಳಿ ಪಡೆ ಡಿಐಜಿ ಬಿ.ಕೆ.ಲೋಶಾಲಿ ಅವರನ್ನು ವಾಯವ್ಯ ಕರಾವಳಿ ವಲಯ ಮುಖ್ಯಸ್ಥ ಹುದ್ದೆಯಿಂದ ಕಿತ್ತುಹಾಕಲಾದ್ದು, ಬೇರೊಂದು ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಬೋಟ್ ಸ್ಫೋಟ ಪ್ರಕರಣ ಸಂಬಂಧ ಲಭ್ಯವಿರುವ ಸಾಕ್ಷ್ಯಗಳು, ಶೋಕಾಸ್ ನೋಟೀಸ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ವಿಚಾರಣಾ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಬೋಟ್ ನಲ್ಲಿದ್ದ ಉಗ್ರರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ ಎಂದು ಸರ್ಕಾರದ ಪ್ರತಿಪಾದನೆಗೆ ವಿರುದ್ಧವಾಗಿ ಲೋಶಾಲಿ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.