ನವದೆಹಲಿ : 'ಆರ್.ಎಸ್.ಎಸ್' ಮುಖಂಡ ಮೋಹನ್ ಭಾಗವತ್ ಮತ್ತೊಮ್ಮೆ ಸುದ್ದಿಮಾಧ್ಯಮಗಳಲ್ಲಿ ಚರ್ಚೆಯಾಗುವಂತಹ ಹೇಳಿಕೆ ನೀಡಿದ್ದು, ಪ್ರತಿಯೊಬ್ಬರಲ್ಲಿಯೂ ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಬೇಕೆಂದು ಕರೆ ನೀಡಿದ್ದಾರೆ.
ಹಿಂದೂ ಸಮಾಜದಲ್ಲಿರುವ ದೌರ್ಬಲ್ಯದಿಂದ, ನಮ್ಮ ಸಮಾಜದವನ್ನು ಅರಿಯದೇ ಇರುವವರು ಮುನ್ನಡೆಯುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬಬ್ಬರಲ್ಲಿಯೂ ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಬೇಕು. ಇದಕ್ಕಾಗಿ ಹಿಂದೂ ಧರ್ಮದ ಸಂತರು ಸಹಾಯ ಮಾಡಬೇಕೆಂದು ಎಂದು ಸಂತ ಸಮಾಗಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
ಸಂತರ ಬೋಧನೆ ಬಗ್ಗೆ ನಮ್ಮ ದೇಶದಲ್ಲಿ ಅಪಾರವಾದ ನಂಬಿಕೆ ಇದೆ. ಸಾಧು ಸಂತರು ತಮ್ಮ ತಪಸ್ಸಿನಿಂದ ಹಿಂದೂ ಸಮಾಜವನ್ನು ಒಗ್ಗೂಡಿಸಿ, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಭಾಗವತ್ ಸಂತಸ ವ್ಯಕ್ತಪಡಿಸಿದ್ದಾರೆ.
ಫೆ.23ರಂದೂ ಸಹ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮೋಹನ್ ಭಾಗವತ್, ಮದರ್ ತೆರೇಸಾ ಅವರು ಬಡವರಿಗೆ ಮಾಡಿದ ಸೇವೆಯ ಹಿಂದಿನ ಉದ್ದೇಶ ಮತಾಂತರವಾಗಿತ್ತು ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.