ನವದೆಹಲಿ : ಪೊಲೀಸರ ಜೊತೆ ಘರ್ಷಣೆ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಇಬ್ಬರು ಶಾಸಕರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಬುರಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜತೆ ಘರ್ಷಣೆ ನಡೆಸಿದ ಎಎಪಿ ಶಾಸಕರಾದ ಸಂಜೀವ್ ಝಾ ಹಾಗೂ ಮಾಡಲ್ ಟೌನ್ನ ಅಖಿಲೇಶ್ ಪಿ.ತ್ರಿಪಾಠಿ ಹಾಗೂ ಅವರ ಬೆಂಬಲಿಗರು ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದ, 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಎಪಿಯ ಶಾಸಕರನ್ನು ಬಂಧಿಸಿಲ್ಲವಾದರೂ, ಎಫ್ಐಆರ್ನಲ್ಲಿ ಅವರ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನ್ ಎನ್ ಕ್ಲೇವ್ ಕಾಲೋನಿಯಿಂದ ಬಾಲಕನೊಬ್ಬನನ್ನು ಅಪಹರಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಹಿಡಿದು ಕರೆತಂದಿದ್ದು ಎಎಪಿ ಕಾರ್ಯಕರ್ತರು, ಝಾ ಅವರ ಜತೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ನಂತರ ತ್ರಿಪಾಠಿ ಸಹ ಅವರ ಬೆಂಬಲಿಗರೊಂದಿಗೆ ಅಲ್ಲಿಗೆ ಬಂದರು. ಬುರಾರಿ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ರಾತ್ರಿ ಕಾರು ನಿಲ್ಲಿಸಲು ಅವಕಾಶ ನೀಡಿದ ಹಿನ್ನೆಲೆ ಶುರುವಾದ ಗಲಾಟೆ ಬಡಿದಾಟದಲ್ಲಿ ಅಂತ್ಯವಾಗಿದೆ.