Untitled Document
Sign Up | Login    
Dynamic website and Portals
  
February 21, 2015

ಸರ್ಕಾರ ಪ್ರಬಲವಾದ ಮಾತ್ರಕ್ಕೆ ಸರಿದಾರಿಯಲ್ಲಿ ಹೋಗುತ್ತದೆ ಎನ್ನಲಾಗದು: ರಾಜನ್

ಪಣಜಿ : ಬಲಿಷ್ಠ ಸರ್ಕಾರ ಯಾವತ್ತೂ ಸರಿದಾರಿಯಲ್ಲಿ ಸಾಗದು ಎಂದು ರಿಸರ್ವ್‌ ಬ್ಯಾಂಕ್‌ ಮುಖ್ಯಸ್ಥ ರಘುರಾಂ ರಾಜನ್‌ ಕೇಂದ್ರ ಸರ್ಕಾರದತ್ತ ಚಾಟಿ ಬೀಸಿದ್ದಾರೆ.

ಹಿಟ್ಲರ್‌ ಆಡಳಿತವನ್ನು ಉದಾಹರಿಸಿ ಮಾತನಾಡಿದ ಅವರು, ಆಡಳಿತ ಮಧ್ಯಮ ಕ್ರಮಾಂಕದ ಆಡಳಿತವನ್ನು ಪರಿಶೀಲಿಸದೇ ಹೋದಲ್ಲಿ, ಅದು ಪಾರ್ಶ್ವವಾಯುಗೆ ತುತ್ತಾದಂತೆ ಆಗುತ್ತದೆ ಎಂದು ಹೇಳಿದರು. ಪಣಜಿಯಲ್ಲಿ ಉಪನ್ಯಾಸ ನೀಡಿದ ಅವರು, ಸರ್ಕಾರವನ್ನು ಪರಿಣತರು, ಪ್ರೇರಣೆ, ಸಮಗ್ರತೆ ಕಾಯುವವರು ಮುನ್ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಪ್ರಬಲವಾದ ಮಾತ್ರಕ್ಕೆ ಅದು ಸರಿಯಾದ ದಾರಿಯಲ್ಲಿದೆ ಹೋಗುತ್ತದೆ ಎಂದು ಹೇಳಲು ಸಾಧುವಿಲ್ಲ. ಹಿಟ್ಲರ್‌ ಕಾಲದಲ್ಲಿ ಜರ್ಮನಿಯಲ್ಲಿ ರೈಲುಗಳು ಸರಿಯಾದ ಸಮಯ ತಪ್ಪುತ್ತಲೇ ಇರಲಿಲ್ಲ. ಸರ್ಕಾರವೂ ಬಲಿಷ್ಠವಾಗಿ, ಪರಿಣಾಮಕಾರಿಯಾಗಿತ್ತು. ಆದರೆ, ಕಾನೂನು ಪರಿಧಿ ಮೀರಿ, ಚುನಾವಣೆಗಳನ್ನೇ ಇಲ್ಲವಾಗಿಸಿ ಏಕಮುಖವಾಗಿ ಸಾಗಿತು. ಆದ್ದರಿಂದ ನಮಗೆ ಸಮಯಕ್ಕೆ ಸರಿಯಾದ ರೈಲಿಗಿಂತ ನಿರ್ದಿಷ್ಟ ಸಮಯದೊಂದಿಗೆ ಗುರಿ ತಲುಪುವ ರೈಲು ಬೇಕೆಂದು ಮಾರ್ಮಿಕವಾಗಿ ನುಡಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited