ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಹಿನ್ನಲೆಯಲ್ಲಿ ಬಿಜೆಪಿ ಕಾರ್ಯತಂತ್ರಕ್ಕೆ ಆರ್.ಎಸ್.ಎಸ್ ಗರಂ ಆಗಿದೆ.
ಕೊನೆ ಕ್ಷಣದಲ್ಲಿ ಸಿಎಂ ಅಭ್ಯರ್ಥಿಯಾಗಿ ಕಿರಣ್ ಬೇಡಿ ಆಯ್ಕೆ ತಪ್ಪು ನಿರ್ಧಾರ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಿದೆ ತರಾಟೆಗೆ ತೆಗೆದುಕೊಂಡಿದೆ.
ಚುನಾವಣೆ ಸೋಲಿಗೆ ಯಾರು ಹೊಣೆ ಎಂದು ಆರ್.ಎಸ್.ಎಸ್ ಮುಖವಾಣಿ ಪಾಂಚಜನ್ಯದಲ್ಲಿ ಬಿಜೆಪಿ ಹೈಕಮಾಂಡ್ ನ್ನು ಪ್ರಶ್ನಿಸಿದೆ.
ಅಲ್ಲದೇ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಿರಣ್ ಬೇಡಿ ಅವರನ್ನು ಸಿಎಂ ಅಭ್ಯರ್ಥಿ ಯನ್ನಾಗಿ ತಡವಾಗಿ ಘೋಷಿಸುವ ಮೂಲಕ ಬಿಜೆಪಿ ಎಡವಿತು. ಜತೆಗೆ, ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಹಿರಿಯ ನಾಯಕರಿದ್ದರೂ ಬೇಡಿ ಹೆಸರನ್ನು ಘೋಷಿಸಿದ ಬಿಜೆಪಿ ತನ್ನ ಸೋಲನ್ನು ಚುನಾವಣೆಗೆ ಮೊದಲೇ ಒಪ್ಪಿಕೊಂಡಂತಾಯಿತು ಎಂದು ಹೇಳಿದೆ.
ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರು, ದೆಹಲಿಯಲ್ಲಿ ನನಗೆ ವಿಜಯ್ ಗೋಯಲ್, ವಿಜೇಂದ್ರ ಗುಪ್ತಾ ಮತ್ತು ಕುಮಾರ್ ಮಲ್ಹೋತ್ರಾ ಎಂಬ ಮೂರು `ವಿಜಯ'ಗಳಿವೆ ಎಂದಿದ್ದರು. ಆದರೆ ಇವರೆಲ್ಲರನ್ನೂ ಈ ಬಾರಿ ಕಡೆಗಣಿಸಲಾಯಿತು. ಬಿಜೆಪಿಯ ದರ್ಜೆ ಮತ್ತು ದಾಖಲೆಗಳಿಗೆ ದೆಹಲಿ ಚುನಾವಣೆಯನ್ನು ಗೆಲ್ಲಲಾಗಲಿಲ್ಲ ಒಟ್ಟಾರೆ ಬಿಜೆಪಿ ತಕ್ಕ ಪಾಠ ಕಲಿಯಿತು ಎಂದು ಕಿಡಿಕಾರಿದೆ.