ಮುಂಬೈ : ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಂದ ನಾನು ಸಾಕಷ್ಟು ಕಲಿಯುವುದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶರದ್ ಪವಾರ್ ಕ್ಷೇತ್ರವಾದ ಮಹಾರಾಷ್ಟ್ರದ ಬಾರಾಮತಿಯಲ್ಲಿ ಕೃಷಿ ವಿಜ್ನಾನ ಕೇಂದ್ರ ಉದ್ಘಾಟಿಸಿದ ಅವರು, ಕೃಷಿ ವಿಷಯದಲ್ಲಿ ಅವರಿಗೆ ಅಪಾರ ಅನುಭವವಿದೆ ಎಂದರು.
ಪವಾರ್ ಅನುಭವದಿಂದ ನಾನು ಸಾಕಷ್ಟು ಕಲಿಯುವುದಿದೆ. ನಮ್ಮ ಎರಡೂ ಪಕ್ಷಗಳ ಸಿದ್ಧಾಂತ ಬೇರೆ ಬೇರೆ ಇದೆ. ಕೃಷಿಯಲ್ಲಿ ಅವರಿಗೆ ಅಪಾರ ಅನುಭವವಿದೆ. ಪ್ರಗತಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ತಿಳಿಸಿದರು.
ಪ್ರತಿ ತಿಂಗಳೂ ಪವಾರ್ ಜತೆ ಮಾತನಾಡುತ್ತೇನೆ ಎಂದ ಮೋದಿ, ಬಡತನ ನಿರ್ಮೂಲನೆಯಲ್ಲಿ ಕೃಷಿ ಮಹತ್ವದ ಪಾತ್ರವಹಿಸಿದೆ. ಬಾರಾಮತಿಯಲ್ಲಿ ರೈತರು ಕೃಷಿಯನಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.