Untitled Document
Sign Up | Login    
Dynamic website and Portals
  
January 29, 2015

ಘರ್ ವಾಪಸೀ ಭಯೋತ್ಪಾದನೆಯನ್ನು ಕೊನೆಗೊಳಿಸಬಲ್ಲದು: ಜುಗಲ್‌ ಕಿಶೋರ್

ನವದೆಹಲಿ : ಮತಾಂತರವೇ ಭೀತಿವಾದದ ಮೂಲವಾಗಿದೆ. ಘರ್ ವಾಪಸೀ ನಡೆದಾಗಲೇ ಭಯೋತ್ಪಾದನೆಯ ಪಿಡುಗು ಕೊನೆಗೊಳ್ಳಬಲ್ಲುದು ಎಂದು ವಿಶ್ವಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜುಗಲ್‌ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ರಾಮಪುರ್ಹತ್‌ ನ ಖೂರ್ಮದಂಗಾ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್‌ ಸಂಘಟಿಸಿದ್ದ ವಿರಾಟ್‌ ಹಿಂದೂ ಸಮ್ಮೇಳನದಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಈ ಹಿಂದೆ ಮತಾಂತರಗೊಂಡಿದ್ದ ಸುಮಾರು 50 ಮಂದಿಯನ್ನು ಮರಳಿ ಹಿಂದೂ ಧರ್ಮಕ್ಕೆ ತರಲಾಯಿತು. ಈ ವೇಳೆ ಮಾತನಾಡಿದ ಜುಗಲ್ ಕಿಶೋರ್, ನಮ್ಮ ಧರ್ಮದ ಜನರನ್ನು ಮರಳಿ ನಮ್ಮ ಧರ್ಮಕ್ಕೆ ತರುವ ಮೂಲಕ ನಾವು ಯಾವುದೇ ಪಾಪ ಎಸಗಿದಂತಾಗುವುದಿಲ್ಲ. ಘರ್ ವಾಪಸೀ ಕಾರ್ಯಕ್ರಮದ ಮೂಲಕ ನಾವು ದೇಶ ಸೇವೆಯನ್ನು ಮುಂದುವರಿಸುವೆವು ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರ ಇನ್ನು ಮುಂದೆ ಮಸೀದಿ, ಚರ್ಚುಗಳು ಹಾಗೂ ಮದ್ರಸಗಳಲ್ಲಿ ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುವಂತೆ ಕೇಳಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited