Untitled Document
Sign Up | Login    
Dynamic website and Portals
  
January 28, 2015

ಅರ್ಕಾವತಿ ಡಿನೋಟಿಫೀಕೇಷನ್‌ಃ ಕಡತ ವಿಲೇವಾರಿ ಕೊಠಡಿಗೆ ಬೀಗ

BW News Bureau : ಅರ್ಕಾವತಿ ಬಡಾವಣೆ ಡಿನೋಟಿಫೀಕೇಷನ್‌ಗೆ ಸಂಬಂಧಪಟ್ಟಂತೆ ಇದ್ದ ದಾಖಲೆಯ ಕೊಠಡಿಗೆ ಹೊರಗಿನಿಂದ ಬೀಗ ಹಾಕಿಕೊಂಡ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಸಿಬ್ಬಂದಿ, ಒಳಗೆ ಕುಳಿತು ಕಡತ ವಿಲೇವಾರಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೊಠಡಿಗೆ ಬೀಗ ಹಾಕಿಕೊಂಡು ಕೆಲಸ ಮಾಡುವುದರ ಜತೆಗೆ ಇಬ್ಬರು ಪೊಲೀಸ್‌ ಪೇದೆಗಳನ್ನು ಕೊಠಡಿಯ ಹೊರಗೆ ಭದ್ರತೆಗೆ ನಿಯೋಜಿಸಲಾಗಿದೆ. ಇದರ ಬೆನ್ನಲ್ಲೇ ಕೊಠಡಿಯ ಬೀಗ ತೆರವಿಗೆ ಬಿಡಿಎ ಆಯುಕ್ತ ಶ್ಯಾಂಭಟ್‌ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ ಬಡಾವಣೆ ಡಿನೋಟಿಫೀಕೇಷನ್‌ ವಿವಾದ ಸುತ್ತಿಕೊಂಡಿರುವ ವೇಳೆಯೇ ಬಿಡಿಎ ಕಚೇರಿಯಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ವಿವಾದ ಮತ್ತೂಂದು ಮಜಲು ಪಡೆದುಕೊಳ್ಳಲು ಕರಣವಾಗಿದೆ.

ನಿವೃತ್ತ ನ್ಯಾ.ಎಚ್‌.ಎಸ್‌.ಕೆಂಪಣ್ಣ ಆಯೋಗ ಹಗರಣ ಸಂಬಂಧ ಕಡತಗಳನ್ನು ನೀಡುವಂತೆ ಬಿಡಿಎಗೆ ಕೋರಿದ್ದರು. ಅಲ್ಲದೇ. ಬಡಾವಣೆ ರಚನೆಗೆ ಹೊರಡಿಸಿದ್ದ ಅಂತಿಮ ಅಧಿಸೂಚನೆಯಿಂದ ಪರಿಷ್ಕೃತ ಯೋಜನೆಗಳವರೆಗಿನ ಆದೇಶಗಳ ಕಡತಗಳನ್ನು ಜೋಪಾನವಾಗಿ ಕಾಪಾಡುವಂತೆ ನಗರಾಭಿವೃದ್ಧಿ ಇಲಾಖೆ ನೀಡಿರುವ ಸೂಚನೆ ಮೇರೆಗೆ ಕಳೆದ 20 ದಿನಗಳಿಂದ ಕಡತಗಳ ವಿಲೇವಾರಿ ಕೆಲಸದಲ್ಲಿ ತೊಡಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೊಠಡಿಗೆ ಬೀಗ ಹಾಕಿಕೊಂಡು ಕೆಲಸ ಮಾಡುತ್ತಿದ್ದು, ಈಗ ಬಹಿರಂಗಗೊಂಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited