ಮೈಸೂರು : ಹೆಚ್ ಡಿ ದೇವೇಗೌಡ ಕುಟುಂಬದವರು ಬಿಪಿಎಲ್ ಕಾರ್ಡ್ ಹೊಂದಿರುವವರಂತೆ ಆಡುತ್ತಿದ್ದಾರೆ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಛೇರಿ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಹಾಗೂ ರೇವಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶ್ರೀರಾಮುಲು ಅಂತವರೇ ಪಕ್ಷದ ಕಛೇರಿ ಕಟ್ಟಿಸಿಕೊಂಡಿದ್ದಾರೆ. ದೇವೇಗೌಡರಿಗೆ ಆಗಲ್ವಾ ಎಂದು ಪ್ರಶ್ನಿಸಿದರು. ಜೆಡಿಎಸ್ ಗೆ ಕಛೇರಿ ಕಟ್ಟಿಕೊಳ್ಳುವಷ್ಟು ಶಕ್ತಿತಿಯಿದೆ. ಆದರೂ ದೇವೇಗೌಡರುಹಾಗೂ ಅವರ ಮಕ್ಕಳು ನಾಟಕವಾಡುತ್ತಿದ್ದಾರೆ ಎಂದು ಗುಡುಗಿದರು.
ಈಗಿರುವ ಕಛೇರಿ ಹಿಂದಿರುವ ಜಾಗದಲ್ಲಿ ಜೆಡಿಎಸ್ ಕಛೇರಿಗಾಗಿ ಶೆಡ್ ನಿರ್ಮಾಣ ಮಾಡಲಾಗಿದೆ. ಆದರೆ ಆ ಜಾಗ ಕೂಡ ಕಾಂಗ್ರೆಸ್ ಗೆ ಸೇರಿದ್ದು, ಆದಾಗ್ಯೂ ಅಲ್ಲಿ ಅನುಮತಿಯಿಲ್ಲದೇ ಜೆಡಿಎಸ್ ಕಚೇರಿ ನಿರ್ಮಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.