BW News Bureau : 'ಕಿಚ್ಚ ಸುದೀಪ್' ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್(ಸೆಲಬ್ರಿಟಿ ಕ್ರಿಕೇಟ್ ಲೀಗ್) ನಲ್ಲಿ ಈ ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮುವ ಸಾಧ್ಯತೆಗಳು ದಟ್ಟವಾಗಿದೆ.
ಸೆಲಬ್ರಿಟಿ ಕ್ರಿಕೇಟ್ ಲೀಗ್ ನ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಮಣಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಬುಲ್ಡೋಜರ್ಸ್ ನಿಗದಿತ 20 ಓವರ್ ಗಳಲ್ಲಿ 255 ರನ್ ಗಳನ್ನು ಕಲೆಹಾಕಿ ಎದುರಾಳಿ ಬೆಂಗಾಲ್ ಟೈಗರ್ಸ್ ತಂಡಕ್ಕೆ ಕಠಿಣ ಸವಾಲನ್ನು ಒಡ್ಡಿತು. ಈ ಮೊತ್ತದ ಬೆನ್ನುಹತ್ತಿದ ಬೆಂಗಾಲ್ ಟೈಗರ್ಸ್ ಅಂತಿಮವಾಗಿ 141 ರನ್ ಗೆ ಕೈಚೆಲ್ಲಿದರು. ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ 114 ರನ್ ಗಳ ಗೆಲುವು ದಾಖಲಿಸಿತು.
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ರಾಜೀವ್ ಪಡೆದರು. ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ಸುದೀಪ್, ಬೆಂಗಾಲ್ ಟೈಗರ್ಸ್ ವಿರುದ್ಧದ ಗೆಲುವು ತಂಡದ ಸ್ಪೂರ್ತಿಯನ್ನು ಹೆಚ್ಚಿಸಿದ್ದು ಫೈನಲ್ ಪಂದ್ಯಾವಳಿಯಲ್ಲೂ ಗೆಲ್ಲುವ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದ್ದಾರೆ.