ಕರಾಚಿ : ಭೂಗತ ಪಾತಕಿ, 1993 ರ ಮುಂಬೈ ಸ್ಪೋಟದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಗೆ ವಾಪಸ್ಸಾಗಿದ್ದಾನೆ ಎಂದು ವರದಿಯಾಗಿದೆ.
ವರದಿಯಾದಂತೆ ಭದ್ರತಾ ಕಾರಣಗಳಿಗಾಗಿ ಅಫ್ಘಾನಿಸ್ತಾನ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಡಗಿಕೊಂಡಿದ್ದದಾವೂದ್ ಇಬ್ರಾಹಿಂ ನನ್ನು ಪಾಕಿಸ್ತಾನದ ಐಎಸ್ಐ ಕರಾಚಿಗೆ ಕರೆಸಿಕೊಂಡಿದೆ.
ಈ ಹಿಂದೆ ದಾವೂದ್ನನ್ನು ಸುರಕ್ಷಿತ ಸ್ಥಳವೊಂದಕ್ಕೆ ಕರೆದೊಯ್ಯಲು ಐಎಸ್ಐ ಯೋಚಿಸಿತ್ತಾದರೂ ಕಡೇ ಗಳಿಗೆಯಲ್ಲಿ ಕರಾಚಿಗೆ ಕರೆ ತಂದಿದೆ ಎಂದು ವರದಿಯಾಗಿದೆ.
ಈ ಹಿಂದೆ ಐಎಸ್ಐ ದಾವೂದ್ನನ್ನು ಥಾಯ್ಲ್ಯಾಂಡ್ ,ನೈರೋಮಿ,ಯುಎಇ ಮತ್ತು ಬಾಂಗ್ಲಾದೇಶಕ್ಕೆ ಕರೆದೊಯ್ಯಲು ಯೋಜನೆ ಹಾಕಿಕೊಂಡಿತ್ತು ಎನ್ನಲಾಗಿದೆ.
ದಾವೂದ್ಗೆ ರಕ್ಷಣೆ ನೀಡುವ ಜವಾಬ್ದಾರಿಯನ್ನು ಪಾಕ್ ಸೇನೆ ಮತ್ತು ಐಎಸ್ಐ ಹೊತ್ತುಕೊಂಡಿದೆ ಎಂದು ಹೇಳಲಾಗಿದೆ. ತಿಂಗಳ ಹಿಂದಷ್ಟೆ ಭಾರತ ಸರ್ಕಾರ ದಾವೂದ್ನನ್ನು ಒಪ್ಪಿಸಲು ಪಾಕಿಸ್ತಾನ ಸರ್ಕಾರವನ್ನುಕೇಳಿಕೊಂಡಿತ್ತು.