ಲಖನೌ : ಜಮ್ಮು-ಕಶ್ಮೀರದ ಗಡಿಯಲ್ಲಿ ಪಾಕ್ ಸೇನೆಯ ಪುಂಡಾಟಕ್ಕೆ ಗರಂ ಆಗಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಾಗ್ದಾಳಿ ನಡೆಸಿದ್ದಾರೆ.
ಗಡಿಯಲ್ಲಿ ಪಾಕ್ ಸೇನೆಯಿಂದ ನಡೆಯುತ್ತಿರುವ ನಿರಂತರ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಒಳಗೆ ಉಗ್ರರನ್ನು ನುಸುಳಿಸಲು ಪಾಕ್ ಯತ್ನ ನಡೆಸುತ್ತಿದೆ ಎಂದರು.
ಪಾಕ್ ಜತೆ ನಾವು ಶಾಂತಿಯುತ ಒಪ್ಪಂದ ಬಯಸುತ್ತೇವೆ. ಆದರೆ ಪಾಕ್ ಪುಂಡಾಟ ಇದೇ ರೀತಿ ಮುಂದುವರಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಗುಡುಗಿದರು.
ಇನ್ನಾರು ತಿಂಗಳಲ್ಲಿ ಬದಲಾವಣೆ ಕಾಣುವಿರಿ. ಪಾಕ್ ಗೆ ಇಂತಹ ಮುಸುಕಿನ ಯುದ್ಧವೇ ಬೇಕಿದ್ರೆ ನಾವು ಸಿದ್ಧ ಎಂದು ಹೇಳುವ ಮೂಲಕ ರಕ್ಷಣಾ ಸಚಿವರು ಪಾಕ್ ಸೇನೆಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.