BW News Bureau : ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷ . ದೆಹಲಿ ಮಾದರಿಯಲ್ಲಿ ಬಿಬಿಎಂಪಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಆಮ್ ಆದ್ಮಿ ಪಾರ್ಟಿ ಘಟಕದಿಂದ ಈಗಾಗಲೇ ತಯಾರಿ ನಡೆದಿದ್ದು, ಜನರ ಅಹವಾಲು ಸ್ವೀಕರಿಸಲು ಪ್ರತ್ಯೇಕ ವೆಬ್ ಸೈಟ್ ಆರಂಭಿಸಲಿದ್ದಾರೆ. ಬೊಂಬಾಟ್ ಬೆಂಗಳೂರು ಹೆಸರಲ್ಲಿ ಆಪ್ ನ ನೂತನ ವೆಬ್ ಸೈಟ್ ಆರಂಭವಾಗಲಿದೆ.
ಈ ಬಗ್ಗೆ ರಾಜ್ಯ ಆಪ್ ನಾಯಕರು ಚಿಂತನೆ ನಡೆಸಿದ್ದು, ಸಾರ್ವಜನಿಕ ಆಡಳಿತ, ಶಿಕ್ಷಣ, ಆರೋಗ್ಯ, ಕಸವಿಲೇವಾರಿ ಕುರಿತ ಜನರ ಅಹವಾಲು ಸ್ವೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ ನೀಡುವಂತೆ ಆಪ್ ನಾಯಕರು ಮನವಿ ಮಾಡಿದ್ದಾರೆ.
ಇನ್ನು ಯೋಜನೆಗಳ ಕಾರ್ಯಗತಿ ಕುರಿತು ಚರ್ಚಿಸಲು ಸಭೆ ನಿಗದಿ. ಜ.24ರಂದು ಮೊದಲ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.