ನವದೆಹಲಿ : ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣ ಕುರಿತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಸುನಂದಾ ಸಾವಿನ ಬಗ್ಗೆ ನನಗೆ ಹಲವು ಸಂದೇಹವಿದೆ. ಸುನಂದಾ ಪತಿಯಾಗಿ ಆಕೆಯ ಹತ್ಯೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ ಎಂದಿದ್ದಾರೆ.
ಕೇವಲ ಡಾ.ಸುಧೀರ್ ಗುಪ್ತಾ ವರದಿಯಿಂದ ಸುನಂದಾ ಕೊಲೆಯಾಗಿದೆ ಎಂದು ನಿರ್ಧಾರ ಕೈಗೊಳ್ಳಲಾಗಿದೆ. ಓರ್ವ ವೈದ್ಯರ ವರದಿಯಿಂದ ಇದನ್ನು ಸ್ಪಷ್ಟಪಡಿಸುತ್ತೀರಾ? ಎಂದು ತರೂರ್ ಪತ್ರದಲ್ಲಿ ದೆಹಲಿ ಪೊಲೀಸರಿಗೆ ತರೂರ್ ಪ್ರಶ್ನೆಮಾಡಿದ್ದಾರೆ.
ಸುನಂದಾ ಪುಷ್ಕರ್ ಹತ್ಯೆ ಬಗ್ಗೆ ಸಂಪೂರ್ಣ ವರದಿಯನ್ನು ನಾನು ತಿಳಿಯಬೇಕಿದೆ ಎಂದು ತರೂರ್ ತಿಳಿಸಿದ್ದಾರೆ.