ನವದೆಹಲಿ : ತನ್ನ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣವನ್ನು ಕೊಲೆ ಕೇಸು ಎಂದು ಪರಿಗಣಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನ.7 ಮತ್ತು ನ.8ರಂದು ಪೊಲೀಸರು ನನ್ನ ಮನೆಯ ನೌಕರ ನಾರಾಯಣ ಸಿಂಗ್ನನ್ನು ದೆಹಲಿ ಪೊಲೀಸ್ನ 4 ಅಧಿಕಾರಿಗಳು 16 ತಾಸಿನ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಪೊಲೀಸರು ಆತನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ಮೂಲಕ ಸುನಂದಾಳನ್ನು ನಾನು ಮತ್ತು ನಾರಾಯಣ ಸಿಂಗ್ ಸೇರಿಕೊಂಡು ಕೊಲೆ ಮಾಡಿದೆವು ಎಂಬ ಹೇಳಿಕೆ ಪಡೆಯಲು ಯತ್ನಿಸಿದ್ದಾರೆ ಎಂದು ಶಶಿ ತರೂರ್ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರಿಗೆ ಬರೆದಿದ್ದ ಪತ್ರದಲ್ಲಿ ಆರೋಪಿಸಿದ್ದಾರೆ.
ಪೊಲೀಸರ ನಡೆಯಿಂದ ತನಗೆ ತೀವ್ರ ಆಘಾತವಾಗಿದೆ ಎಂದು ಹೇಳಿದ್ದಾರೆ. ಈ ನಡುವೆ
ತರೂರ್ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ಸಿ, ಪತ್ರದಲ್ಲಿ ತರೂರ್ ಆರೋಪಗಳನ್ನು ಮಾಡಿದ್ದರೆ ಆ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದಾರೆ.