Mangalore : ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಜನಾರ್ದನ ಪೂಜಾರಿ ಯಾರು ಎಂದು ಗೋತ್ತಾಗಬೇಕಾದರೆ ಇನ್ನೊಮ್ಮೆ ಹುಟ್ಟಿ ಬರಬೇಕು. ಬಹುಶಃ ಅವರಿಗೆ ಅರಳು, ಮರಳು ಇರಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಗುಡುಗಿದ್ದಾರೆ.
ಪೂಜಾರಿ ಯಾರೆಂದು ಗೊತ್ತಿಲ್ಲ ಎನ್ನುವ ಕಾಗೋಡು ತಿಮ್ಮಪ್ಪ, ನಾನು ವಕೀಲ ಆಗಿದ್ದೆ ಎಂದಿದ್ದಾರೆ. ಅದು ಅವರಿಗೆ ಹೇಗೆ ತಿಳಿಯಿತು? ಪೂಜಾರಿ ಕೇಂದ್ರ ಸಚಿವರಾಗಿದ್ದಾಗ ನಿಮಗೆ ಚಿಗುರು ಮೀಸೆ ಬರ್ಲಿಲ್ಲ. ನಾನು ಕಾಂಗ್ರೆಸ್ನ ಚುನಾವಣಾ ಕೇಂದ್ರ ಸಮಿತಿಯಲ್ಲಿ ಇದ್ದಾಗ ಚುನಾವಣೆಗೆ ಸ್ಫರ್ಧಿಸಲು ಟಿಕೆಟ್ ಕೊಡಿಸಿಲ್ವಾ? ಈಗ ಗುರುತು ಸಿಗುವುದಿಲ್ಲವಾ? ಆ ಪರಿಸ್ಥಿತಿಗೆ ಬಂದಿದ್ದೀರಾ ಎಂದು ಪೂಜಾರಿ ವ್ಯಂಗ್ಯವಾಡಿದರು.
4 ಬಾರಿ ಸಂಸದನಾಗಿದ್ದೆ. 2 ಅವಧಿಗೆ ರಾಜ್ಯಸಭೆ ಸದಸ್ಯನಾಗಿದ್ದೆ. ಯಾವುದೇ ಬಿಸಿನೆಸ್ ಮಾಡುತ್ತಿಲ್ಲ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿಲ್ಲ. ನಾನು ಕುಡಿಯುವುದಿಲ್ಲ. ಪೂಜಾರಿ ಏನೆಂದು ತಿಳಿಯಲು ಇವರಿಗೆ ಇನ್ನೊಂದು ಜನ್ಮ ಬೇಕು ಎಂದು ತಿರುಗೇಟು ನೀಡಿದರು.