ಬೆಂಗಳೂರು : ಬಿಎಂಟಿಸಿ, ಕೆ ಎಸ್ ಆರ್ ಟಿಸಿ ಬಸ್ ಪ್ರಯಾಣ ದರವನ್ನು ಕೊನೆಗೂ ಇಳಿಕೆಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದರು.
ವೋಲ್ವೋ ಬಸ್ ಪ್ರಯಾಣ ದರದಲ್ಲಿ ಇಳಿಕೆ ಮಾಡಿಲ್ಲ. ಬಿಎಂಟಿಸಿ ಬಸ್ ಗಳಲ್ಲಿ ಪ್ರತಿ ಹಂತದಲ್ಲೂ ತಲಾ 1ರೂ ಇಳಿಕೆಮಾಡಲಾಗಿದೆ. 1,9,12,13,17,18,19 ಹಂತದಲ್ಲಿ 1ರೂ ಇಳಿಕೆಯಾಗಿದ್ದು, 2 ಹಾಗೂ 8ನೇ ಹಂತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿಯ ಮೊದಲ 3 ಹಂತದಲ್ಲಿ ಇಳಿಕೆಯಿಲ್ಲ. 4ರಿಂದ 17ನೇ ಹಂತಕ್ಕೆ 2ರೂ ಇಳಿಕೆಮಾಡಲಾಗಿದೆ. ಹೊರ ರಾಜ್ಯಕ್ಕೆ ತೆರಳುವ ಬಸ್ ಪ್ರಯಾಣ ದರದಲ್ಲಿ ಯಾವುದೇ ಇಳಿಕೆಯಿಲ್ಲ ಎಂದು ವಿವರಿಸಿದರು.
ಇನ್ನು ಶಾಲಾ-ಕಾಲೇಜುಗಳ ಮಾಸಿಕ ಪಾಸ್ ದರದಲ್ಲಿ ಇಳಿಕೆ ಮಾಡಿಲ್ಲ. ಮಾರ್ಚ್ ನಂತರ ಇಳಿಕೆ ಮಾಡಲಾಗುವುದು ಎಂದು ತಿಳಿಸಿದರು.