ಕೇರಳ : ದೇಶದಲ್ಲಿ ನಡೆಯುತ್ತಿರುವ ಮರುಮತಾಂತರಕ್ಕೆ ಬಿಜೆಪಿಯಾಗಲೀ ಆರ್.ಎಸ್.ಎಸ್ ಆಗಲೀ ಕಾರಣವಲ್ಲ ಎಂದು ಕೇರಳದ ಆಂಗ್ಲಿಕನ್ ಚರ್ಚ್ ನ ಆರ್ಚ್ ಬಿಷಪ್ ಹೇಳಿದ್ದಾರೆ.
ಮತಾಂತರ ಎಂಬುದು ನಿರಂತರ ಪ್ರಕ್ರಿಯೆ, ನರೇಂದ್ರ ಮೋದಿ ಪ್ರಧಾನಿಯಾಗಿದ್ದರಿಂದಾಗಿ ಅದು ತೀವ್ರಗೊಂಡಿಲ್ಲ ಎಂದು ಡೆಕನ್ ಕ್ರೋನಿಕಲ್ ಗೆ ನೀಡಿರುವ ಸಂದರ್ಶನದಲ್ಲಿ ಸ್ಟೀಫನ್ ವತ್ತಾಪಾರ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕ್ರಿಶ್ಚಿಯನ್ ಗಳ ವಿರುದ್ಧವೇ ಕಿಡಿಕಾರಿರುವ ಬಿಷಪ್, ಹಿಂದೂ ಧರ್ಮದಿಂದ ಮತಾಂತರಗೊಂಡವರಿಗೆ ಸೂಕ್ತ ಪುನರ್ವಸತಿ ನೀಡಲು ಸಾಧ್ಯವಾಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮರುಮತಾಂತರ ಮಾಡುತ್ತಿರುವುದನ್ನು ವಿರೋಧಿಸಿಸಲು ಚರ್ಚ್ ನ ಮುಖ್ಯಸ್ಥರಿಗೆ ಯಾವುದೇ ನೈತಿಕತೆ ಇಲ್ಲ. ಏಕೆಂದರೆ ಅವರು ಮತಾಂತರಗೊಂಡ ಕ್ರಿಶ್ಚಿಯನ್ ರಿಗೆ ಪುನರ್ವಸತಿ ನೀಡಲು ವಿಫಲರಾಗಿದ್ದಾರೆ ಎಂದು ಸ್ಟೀಫನ್ ಹೇಳಿದ್ದಾರೆ. ಮಾತಾಂತರಗೊಂಡವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿದ್ದರೆ ಅವರು ಹಿಂದೂ ಧರ್ಮಕ್ಕೆ ಮರುಮತಾಂತರಗೊಳ್ಳುತ್ತಿರಲಿಲ್ಲ ಎಂಬುದು ಆಂಗ್ಲಿಕನ್ ಚರ್ಚ್ ನ ಆರ್ಚ್ ಬಿಷಪ್ ಅಭಿಪ್ರಾಯ.