ಮುಂಬೈ : ಫೆಬ್ರವರಿಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಒಟ್ಟು 15 ಜನ ಆಟಗಾರರ ಹೆಸರನ್ನು ಆಯ್ಕೆ ಮಾಡಲಾಗಿದೆ.
ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಸಂದೀಪ್ ಪಟೇಲ್ ನೇತೃತ್ವದ ಆಯ್ಕೆ ಸಮಿತಿ 15 ಆಟಗಾರರ ಹೆಸರನ್ನು ಪ್ರಕಟಿಸಿದೆ.
ಪ್ರಸ್ತುತ ಪಟ್ಟಿಯಲ್ಲಿ ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಮತ್ತು ವಿರೇಂದ್ರ ಸೆಹ್ವಾಗ್ ಅವರ ಹೆಸರನ್ನು ಕೈಬಿಡಲಾಗಿದ್ದು, ಯುವ ಆಟಗಾರರಾದ ಸ್ಟುವರ್ಟ್ ಬಿನ್ನಿ , ಅಕ್ಷರ್ ಪಟೇಲ್ಗೆ ಅವಕಾಶ ನೀಡಲಾಗಿದೆ.
ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್)
ವಿರಾಟ್ ಕೊಹ್ಲಿ (ಉಪನಾಯಕ)
ಶಿಖರ್ ಧವನ್
ರೋಹಿತ್ ಶರ್ಮಾ
ಅಜಿಂಕ್ಯೆ ರಹಾನೆ
ಸುರೇಶ್ ರೈನಾ
ಅಂಬಟಿ ರಾಯಿಡು
ಭುವನೇಶ್ವರ್ ಕುಮಾರ್
ಉಮೇಶ್ ಯಾದವ್
ರವೀಂದ್ರ ಜಡೇಜಾ
ಅಕ್ಷರ್ ಪಟೇಲ್
ಇಶಾಂತ್ ಶರ್ಮಾ
ಮೊಹಮ್ಮದ್ ಶಮಿ
ಆರ್ ಅಶ್ವಿನ್
ಸ್ಟುವರ್ಟ್ ಬಿನ್ನಿ