ಕುಮಟಾ : 'ಹಿಂದೂ ಸಮಾಜ'ವನ್ನು ಒಗ್ಗೂಡಿಸುವ ಮಹತ್ಕಾರ್ಯಗಳನ್ನು ಮಾಡುತ್ತಿರುವ ರಾಮಚಂದ್ರಾಪುರ ಪೀಠಕ್ಕೆ ಕಳಂಕ ತರುವುದು ಸಮಸ್ತ ಹಿಂದೂ ಸಮಾಜಕ್ಕೆ ಕಳಂಕ ತಂದಂತೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಜ.5ರಂದು ಕುಮಟಾದ ಗಿಬ್ ಹೈಸ್ಕೂಲು ಆವರಣದಲ್ಲಿ ಗುರುಭಕ್ತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಮೇಲೆ ನಿರಂತರವಾಗಿ ಆಘಾತವನ್ನು ಮಾಡಲಾಗುತ್ತಿದೆ. ಈಗ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮಿಜಿಗಳ ಮೇಲೆ ಆರೋಪ ಮಾಡಿರುವುದು ಅಘಾತಕಾರಿ ಎಂದು ಹೇಳಿದ್ದಾರೆ.
ರಾಮಚಂದ್ರಾಪುರ ಪೀಠ ಕೇವಲ ಹವ್ಯಕ ಪೀಠವಲ್ಲ ಸಮಸ್ತ ಹಿಂದೂ ಸಮಾಜದ ಶಕ್ತಿಪೀಠ, ಸಮಸ್ತ ಹಿಂದೂ ಸಮಾಜದ ಶ್ರೇಯಸ್ಸನ್ನು ದೃಷ್ಟಿಯಲ್ಲಿರಿಸಿ ಶ್ರೀಗಳು ಅನೇಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.
ಕೇವಲ ಒಂದು ಪೀಠಕ್ಕೆ ಸೇರಿದ ಪೀಠವನ್ನು 18 ಬೇರೆ ಬೇರೆ ಸಮಾಜಕ್ಕೆ ವಿಸ್ತರಿಸುವ ಮೂಲಕ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ಮಹತ್ಕಾರ್ಯದಲ್ಲಿ ಶ್ರೀಗಳು ತೊಡಗಿಸಿಕೊಂಡಿದ್ದಾರೆ. ದಲಿತರನ್ನು ಹತ್ತಿರ ಸೇರಿಸುವ ಮೂಲಕ ದಲಿತರನ್ನು ಮುಟ್ಟಿಕೊಳ್ಳಬಾರದು ಎಂಬ ಭಾವನೆಯನ್ನು ಹೊಡೆದೋಡಿಸಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.