ನವದೆಹಲಿ : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಪಾಲರ ವರ್ಗಾವಣೆ ಮತ್ತು ರಾಜೀನಾಮೆ ಸರಣಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಉತ್ತರಾಖಂಡ ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ವರ್ಗಾವಣೆ ಮಾಡಲಾಗಿದೆ.
'ಖುರೇಷಿ ಅವರನ್ನು ವರ್ಗ ಮಾಡಲಾಗಿದೆ ಮತ್ತು ಮಿಜೋರಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ' ಎಂದು ರಾಷ್ಟ್ರಪತಿಗಳ ಸಂವಹನದಲ್ಲಿ ತಿಳಿಸಲಾಗಿದೆ. 2017ರ ಮೇ ವರೆಗೆ ಅಲ್ಲಿನ ರಾಜ್ಯಪಾಲರಾಗಿ ಮುಂದುವರಿಯಲಿದ್ದಾರೆ.
ಅಜೀಜ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಮೇಘಾಲಯ ರಾಜ್ಯಪಾಲ ಕೃಷ್ಣನ್ ಕಾಂತ್ ಪೌಲ್ ಅವರನ್ನು ನೇಮಿಸಲಾಗಿದೆ. ಅಲ್ಲದೆ, ಅವರು ಮಣಿಪುರ ರಾಜ್ಯಪಾಲರಾಗಿಯೂ ಹೆಚ್ಚುವರಿ ಅಧಿಕಾರನ್ನು ಹೊಂದಿರಲಿದ್ದಾರೆ. ಇನ್ನು ಮೇಘಾಲಯದ ಹೆಚ್ಚುವರಿ ಹೊಣೆಯನ್ನು ಪ.ಬಂಗಾಳ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರಿಗೆ ವಹಿಸಲಾಗಿದೆ.