Untitled Document
Sign Up | Login    
Dynamic website and Portals
  
December 30, 2014

ಏರ್ ಏಷ್ಯಾ ವಿಮಾನದ ಅವಶೇಷ ಪತ್ತೆ

ಜಕಾರ್ತ : ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಏರ್ ಏಷ್ಯಾ ವಿಮಾನದ ಕೆಲವು ಅವಶೇಷಗಳು ಜಾವಾ ಸಮುದ್ರದಲ್ಲಿ ಮಂಗಳವಾರ ಪತ್ತೆಯಾಗಿರುವುದಾಗಿ ಇಂಡೋನೇಷ್ಯಾ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೊನೇಷ್ಯಾದಿಂದ ನಾಪತ್ತೆಯಾಗಿದ್ದ ಏರ್ ಏಷ್ಯಾ ವಿಮಾನದ ಅವಶೇಷಗಳನ್ನು ಆಸ್ಟ್ರೇಲಿಯಾ ತಂಡ ಪತ್ತೆ ಹಚ್ಚಿರುವುದಾಗಿ ಮಾಧ್ಯಮದ ವರದಿ ಹೇಳಿದೆ.

ಸುಮಾತ್ರಾ ಮತ್ತು ಬರ್ನಿಯೋ ದ್ವೀಪಗಳ ನಡುವಿನ ಜಾವಾ ಸಮುದ್ರದಲ್ಲಿ ಅವಶೇಷಗಳು ಪತ್ತೆಯಾಗಿದೆ ಎಂದು ಇಂಡೋನೇಷ್ಯಾದ ಶೋಧ ಕಾರ್ಯಾಚರಣೆ ತಂಡದ ಮುಖ್ಯಸ್ಥ ಸೋಯಿಲಿಸ್ಟಿಯೋ ಹೇಳಿದ್ದಾರೆ.

ಪತ್ತೆ ಕಾರ್ಯದ ವೇಳೆ ವಿಮಾನದ ತರ್ತು ನಿರ್ಗಮನ ದ್ವಾರ ಮತ್ತು ಬಾಗಿಲು ಸಮುದ್ರದಲ್ಲಿ ತೇಲುತ್ತಿರುವುದು ಕಂಡುಬಂದಿದೆ. ವಿಮಾನ ಸಂಪರ್ಕ ಕಡಿದುಕೊಂಡ 6 ಮೈಲಿ ದೂರದಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬನ ಶವ ತೇಲುತ್ತಿರುವ ದೃಶ್ಯವನ್ನು ಮಾಧ್ಯಮದಲ್ಲಿ ತೋರಿಸಲಾಗಿದೆ.

ಆದರೆ ಪತ್ತೆಯಾಗಿರುವ ಅವಶೇಷಗಳು ಏರ್ ಏಷ್ಯಾ ವಿಮಾನದ್ದೇ ಎಂದು ಶಂಕಿಸಲಾಗುತ್ತಿದ್ದು, ಇಲ್ಲಿಯವರೆಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಪತ್ತೆ ಕಾರ್ಯಕ್ಕೆ ಅಮೇರಿಕಾದ ನೌಕಾಪಡೆ ನೆರವಾಗುತ್ತಿದೆ.

ನಿಗೂಢ ರೀತಿಯಲ್ಲಿ ಭಾನುವಾರ ಬೆಳಗ್ಗೆ ಕಣ್ಮರೆಯಾದ 162 ಪ್ರಯಾಣಿಕರಿದ್ದ ಏರ್‌ ಏಷ್ಯಾ ವಿಮಾನಕ್ಕಾಗಿ ಇಂಡೋನೇಷ್ಯಾದ ಸಮುದ್ರದಲ್ಲಿ ಬಹುರಾಷ್ಟ್ರೀಯ ತಂಡಗಳು ಎರಡನೇ ದಿನವಾದ ಸೋಮವಾರವೂ ಕಾರ್ಯಾಚರಣೆ ಮುಂದುವರಿಸಿತ್ತು. ಆದರೆ ಈವರೆಗೂ ವಿಮಾನದ ಸುಳಿವು ಲಭಿಸಿಲ್ಲವಾಗಿತ್ತು. ಏತನ್ಮಧ್ಯೆ, ನತದೃಷ್ಟ ವಿಮಾನ ಪತನಗೊಂಡು ಸಮುದ್ರ ಆಳದಲ್ಲಿ ಮುಳುಗಿಬಹುದು ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿತ್ತು.

ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುತ್ತಿದ್ದ ಏರ್‌ ಏಷ್ಯಾದ ಕ್ಯುಝಡ್‌8501 ವಿಮಾನ ಭಾನುವಾರ ಟೇಕಾಫ್ ಆದ 42 ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡಿತ್ತು. ಈ ವಿಮಾನದ ಶೋಧಕ್ಕಾಗಿ ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಇಂಡೋನೇಷ್ಯಾ ಹೆಲಿಕಾಪ್ಟರ್‌ವೊಂದು ಜಾವಾ ಬಳಿ ಸಮುದ್ರದಲ್ಲಿ ಎರಡು ತೈಲ ಕಲೆಗಳನ್ನು ಪತ್ತೆ ಮಾಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited