ಅಹಮದಾಬಾದ್ : 'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಮೂಲಕ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ವಿಶ್ವಹಿಂದೂ ಪರಿಷತ್, ಈಗ ಪ್ರಧಾನಿ ಮೋದಿ ರಾಜ್ಯವಾದ ಗುಜರಾತ್&id=16635'>ಗುಜರಾತ್ ನಲ್ಲೂ 225 ಬುಡಕಟ್ಟು ಕ್ರಿಶ್ಚಿಯನ್ ರನ್ನು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ ಎಂದು ಹೇಳಿದೆ.
ಬುಡಕಟ್ಟು ಕ್ರಿಶ್ಚಿಯನ್ ಸಮುದಾಯದವರು ಸ್ವಯಂ ಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಯಾವುದೇ ಒತ್ತಾಯ ನಡೆದಿಲ್ಲ ಎಂದು ವಿ.ಹೆಚ್.ಪಿ ಸ್ಪಷ್ಟಪಡಿಸಿದೆ. ಘರ್ ವಾಪಸಿ ಕಾರ್ಯಕ್ರಮದ ಅಂಗವಾಗಿ ಗುಜರಾತ್&id=16635'>ಗುಜರಾತ್ ನ ವಲ್ಸಾದ್ ಜಿಲ್ಲೆಯಲ್ಲಿ ಮಹಾಯಜ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲದೇ ಹಿಂದೂ ಧರ್ಮಕ್ಕೆ ವಾಪಸ್ಸಾದ ಕ್ರಿಶ್ಚಿಯನ್ನರಿಗೆ ಭಗವದ್ಗೀತೆಯನ್ನೂ ನೀಡಲಾಯಿತು ಎಂದು ವಿ.ಹೆಚ್.ಪಿ ಮುಖಂಡರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಘರ್ ವಾಪಸಿ ಕಾರ್ಯಕ್ರಮ ನಡೆಸಿದ ಬೆನ್ನಲ್ಲೇ ಗುಜರಾತ್&id=16635'>ಗುಜರಾತ್ ನಲ್ಲೂ ಮರುಮತಾಂತರ ಕಾರ್ಯಕ್ರಮ ನಡೆದಿರುವುದು ಅಚ್ಚರಿ ಮೂಡಿಸಿದೆ. ಘರ್ ವಾಪಸಿ ಕಾರ್ಯಕ್ರಮಕ್ಕೆ ಸಂಸತ್ ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಉತ್ತರ ಪ್ರದೇಶ ಮಾತ್ರವಲ್ಲದೇ ಬಿಜೆಪಿ ಆಡಳಿತವಿರುವ ಚತ್ತೀಸ್ ಘರ್ ನಲ್ಲಿಯೂ ಇಂತಹದ್ದೇ ಘಟನೆಗಳು ವರದಿಯಾಗಿದ್ದವು. ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಘರ್ ವಾಪಸಿ ಆಂಧೋಲನವನ್ನು ಸಮರ್ಥಿಸಿಕೊಂಡಿದ್ದರು.